ಎಲ್.ಕೆ ಅಡ್ವಾಣಿ(ಸಂಗ್ರಹ ಚಿತ್ರ) 
ದೇಶ

ಎಬಿ ಬರ್ದಾನ್ ನಿಧನಕ್ಕೆ ಅಡ್ವಾಣಿ ಸಂತಾಪ, ಬಡವರ ಪರ ಧ್ವನಿ ಎಂದು ಬಣ್ಣನೆ

ಸಿಪಿಐ(ಎಂ) ನ ಹಿರಿಯ ನಾಯಕ ಎ.ಬಿ.ಬರ್ದಾನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ಹಿರಿಯ ನಾಕಯ ಎಲ್.ಕೆ ಅಡ್ವಾಣಿ, ಬರ್ದಾನ್ ಅವರನ್ನು ಬಡವರ ಧ್ವನಿ ಎಂದು ಬಣ್ಣಿಸಿದ್ದಾರೆ.

ನವದೆಹಲಿ: ಸಿಪಿಐ(ಎಂ) ನ  ಹಿರಿಯ ನಾಯಕ ಎ.ಬಿ.ಬರ್ದಾನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ಹಿರಿಯ ನಾಕಯ ಎಲ್.ಕೆ ಅಡ್ವಾಣಿ, ಬರ್ದಾನ್ ಅವರನ್ನು ಬಡವರ ಧ್ವನಿ ಎಂದು ಬಣ್ಣಿಸಿದ್ದಾರೆ.
ಬರ್ದಾನ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ ಎಂದಿರುವ ಅಡ್ವಾಣಿ, ಬರ್ದಾನ್ ಅವರು ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿದ್ದರು. ಕಾರ್ಮಿಕ ಒಕ್ಕೂಟದ ಪ್ರಮುಖ ನಾಯಕರಾಗಿ, ಬಡವರ ಧ್ವನಿಯಾಗಿದ್ದರು. ಅತ್ಯುತ್ತಮ ವಾಗ್ಮಿಗಳಾಗಿ ಸದಾ ನೆನಪಿನಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಬರ್ದಾನ್ ಅವರ ರಾಜಕೀಯ ರೈತರು ಹಾಗೂ ಕಾರ್ಮಿಕರ ಕೇಂದ್ರಿತವಾಗಿರುತ್ತಿತ್ತು. ದೇಶದ ಜಾತ್ಯಾತೀತತೆಯನ್ನು ಕಾಪಾಡುವುದು ಅವರ ಬದ್ಧತೆಗಳಲ್ಲಿ ಒಂದಾಗಿತ್ತು, ಹೋರಾಟಗಳ ಮೂಲಕವೇ ರಾಜಕೀಯ ಹಾಗೂ ಸಾಮಾಜಿಕವಾಗಿ ಬರ್ದಾನ್ ತಮ್ಮನ್ನು ಗುರುತುಸಿಕೊಂಡಿದ್ದರು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT