ಜೆ. ಜಯಲಲಿತಾ 
ದೇಶ

ತಮಿಳ್ನಾಡು ಸರ್ಕಾರದಿಂದ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ

ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ...

ಚೆನ್ನೈ: ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ  14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ ಮಾಡಿದ್ದಾರೆ. ಈ ಪರಿಹಾರಧನ  ಮಂಗಳವಾರ ಆಯಾ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. 
ಸೋಮವಾರ ರು. 700 ಕೋಟಿ ಪರಿಹಾರ ಧನ ಬಿಡುಗಡೆಯಾಗಿದ್ದು, ಇನ್ನುಳಿದ ಹಣ ಜನವರಿ 11ಕ್ಕೆ ಬಿಡುಗಡೆಯಾಗಲಿದೆ ಎಂದು ಜಯಲಲತಾ ಹೇಳಿಕೆ  ನೀಡಿದ್ದಾರೆ.
ಸರ್ಕಾರದ ಯೋಜನೆ ಪ್ರಕಾರ ಕುಟುಂಬಗಳು ಸದಸ್ಯರನ್ನು ಕಳೆದುಕೊಂಡಿದ್ದರೆ ಅವರಿಗೆ  ರು. 10,000 ಮತ್ತು ವಿಶೇಷ ಪರಿಹಾರ ಧನ ರು.  5000 ನೀಡಲಾಗುವುದು.  ಇದರೊಂದಿಗೆ 10 ಕೆಜಿ ಅಕ್ಕಿ, ಧೋತಿ ಮತ್ತು ಸೀರೆಯನ್ನು ನೀಡಲಾಗುವುದು. ಅದೇ ವೇಳೆ ಇನ್ನಿತರ ನಾಶ ನಷ್ಟ ಅನುಭವಿಸಿದ ಕುಟುಂಬಗಳಿಗೆ ರು. 5000 ಮತ್ತು 10 ಕೆಜೆ ಅಕ್ಕಿ, ಧೋತಿ ಮತ್ತು ಸೀರೆ  ನೀಡಲಾಗುವುದು. 
ಚೆನ್ನೈ ಜಲಪ್ರಳಯದಲ್ಲಿ 4.93 ಲಕ್ಷ ಜನರಿಗೆ ಹಾನಿಯಾಗಿದ್ದು,  25.48 ಲಕ್ಷ ಮನೆಗಳು ನಾಶವಾಗಿವೆ. ಇಲ್ಲಿನ ಅಂಕಿ ಅಂಶ ಪ್ರಕಾರ 14 ಲಕ್ಷ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT