ಸನಾತನ ಸಂಸ್ಥೆಯಿಂದ ಸಾಹಿತಿ ಸಬ್ನೀಸ್‍ಗೆ ಜೀವ ಬೆದರಿಕೆ? 
ದೇಶ

ಸನಾತನ ಸಂಸ್ಥೆಯಿಂದ ಸಾಹಿತಿ ಸಬ್ನೀಸ್‍ಗೆ ಜೀವ ಬೆದರಿಕೆ?

ಸನಾತನ ಸಂಸ್ಥೆಯ ಕಾನೂನು ಸಲಹೆಗಾರ, ವಕೀಲ ಸಂಜೀವ ಪುನಾಳೆಕರ ಮಾಡಿದ ಟ್ವೀಟೊಂದು ಮಹಾರಾಷ್ಟ್ರ ಹಾಗೂ ಮತ್ತೆ ಬಿರುಗಾಳಿ ಎಬ್ಬಿಸಿದೆ.

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಂಧಶ್ರದ್ಧೆ ನಿರ್ಮೂಲನೆಗೆ ಹೋರಾಡಿದ ಡಾ.ನರೇಂದ್ರ ಧಾಬೋಲ್ಕರ್ ಹಾಗೂ ವಿಚಾರವಾದಿ ಗೋವಿಂದ ಪನ್ಸಾರೆ ಅವರ  ಹತ್ಯೆಯ ವಿಚಾರ ಹಸಿರಾಗಿರುವ ಮಧ್ಯೆಯೇ ಸನಾತನ ಸಂಸ್ಥೆಯ ಕಾನೂನು ಸಲಹೆಗಾರ, ವಕೀಲ ಸಂಜೀವ ಪುನಾಳೆಕರ ಮಾಡಿದ ಟ್ವೀಟೊಂದು ಮಹಾರಾಷ್ಟ್ರ ಹಾಗೂ ಮತ್ತೆ ಬಿರುಗಾಳಿ ಎಬ್ಬಿಸಿದೆ.

ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಸಾಹಿತಿ, ವಿಚಾರವಾದಿ ಪುಣೆಯ ಡಾ. ಶ್ರೀಪಾಲ ಸಬ್ನೀಸ್ ಅವರಿಗೆ ಟ್ವೀಟ್ ಮಾಡಿರುವ
ಪುನಾಳೆಕರ, ``ನೀವು ಬೇಗನೆ ಎದ್ದು ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗಿ ಡಾ. ಶ್ರೀಪಾಲ ಸಬ್ನೀಸ್,'' ಎಂದು ಬರೆದಿದ್ದಾರೆ. ಈಗಾಗಲೇ ಬೆಳಗಿನ ವಾಯು
ವಿಹಾರಕ್ಕೆ ಹೋದ ಸಂದರ್ಭದಲ್ಲಿಯೇ  ದಾಬೋಲಕರ, ಪಾನ್ಸರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿದೆ. ಇದೀಗ ಈ ಟ್ವೀಟ್ ಸಹ ಜೀವ ಬೆದರಿಕೆ ರೀತಿಯೇ ಇದೆ. ಇದರ ಹಿಂದಿನ ಉದ್ದೇಶವನ್ನು ಅರಿಯಬೇಕು ಎಂಬುದು ವಿಚಾರವಾ ದಿಗಳು, ಪ್ರಗತಿಪರರ ಆಗ್ರಹವಾಗಿದೆ.

ಈ ಮಧ್ಯೆ ಪುಣೆಯ ಪಿಂಪ್ರಿಯಲ್ಲಿ ನಡೆಯಲಿರುವ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆಗಿರುವ ಡಾ. ಶ್ರೀಪಾಲ ಸಬ್ನೀಸ್ ಪ್ರತಿಕ್ರಿಯೆ ನೀಡಿ, "ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ಗುಂಡಿಗೆ ಎದೆಯೊಡ್ಡುತ್ತೇನೆ. ಆದರೆ, ಸತ್ಯದ ಪರವಾಗಿ ಹೋರಾಡುತ್ತೇನೆ. ಸತ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ,'' ಎಂದು ಹೇಳಿದ್ದಾರೆ. ಟ್ವೀಟ್ ಮೂಲಕ ಮುಂಜಾನೆ ವಾಯು ವಿಹಾರಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಇದು ಅಸ್ವಾಭಾವಿಕ ಟ್ವೀಟ್ ಹಾಗೂ ಪ್ರಚೋದನೆ ರೀತಿಯ ಜೀವ ಬೆದರಿಕೆಯ ರೂಪದಲ್ಲಿ ಇದೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೋ ನೋಡೋಣ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT