ದೇಶ

ಜನಾರ್ಧನ ರೆಡ್ಡಿ ಜಾಮೀನು ಹಗರಣದಲ್ಲಿ ಭಾಗಿಯಾಗಿದ್ದ ನಿವೃತ್ತ ಜಡ್ಜ್ ನಿಗೂಢ ಸಾವು

Shilpa D

ಹೈದರಾಬಾದ್: ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಹಗರಣದಲ್ಲಿ ಶಾಮೀಲಾಗಿದ್ದ ನಿವೃತ್ತ ಜಡ್ಜ್ ಡಿ. ಪ್ರಭಾಕರ ರಾವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಹೈದರಾಬಾದ್ ನ ಪೂರ್ವ ಮರೇದ್ ಪಳ್ಳಿ ಯ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರಭಾಕರ್ ರಾವ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರಿಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಮೇಲಷ್ಟೇ ಸಾವಿನ ಕಾರಣ ತಿಳಿದು ಬರಲಿದೆ.

ಶ್ರೀಕಾಕುಲಂ ನಲ್ಲಿ ಫ್ಯಾಮಿಲಿ ಕೋರ್ಟ್ ನಲ್ಲಿ ಜಡ್ಜ್ ಆಗಿದ್ದ ಪ್ರಭಾಕರ್ ರಾವ್ ಜನಾರ್ಧನ ರೆಡ್ಡಿಯ ಬೇಲ್ ಗಾಗಿ ಲಂಚ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ಬಂಧಿತರಾಗಿದ್ದರು. ಇವರ ಜೊತೆ ಮತ್ತೊಬ್ಬ ನ್ಯಾಯಾಧೀಶ ಕೆ. ಲಕ್ಷ್ಮಿ ನರಸಿಂಹ ರಾವ್ ಎಂಬುವರನ್ನು ಬಂಧಿಸಲಾಗಿತ್ತು.

ಜಾಮೀನಿಗಾಗಿ ಲಂಚ ಹಗರಣದ ಆರೋಪದ ಮೇಲೆ ಈ ಇಬ್ಬರನ್ನು 2012ರ ಜುಲೈ ನಲ್ಲಿ  ಅಮಾನತಗೊಳಿಸಲಾಗಿತ್ತು.

SCROLL FOR NEXT