ಸ್ವದೇಶಿ ನಿರ್ಮಿತ ವರುಣಾಸ್ತ್ರ (ಸಂಗ್ರಹ ಚಿತ್ರ) 
ದೇಶ

ಬ್ರಹ್ಮೋಸ್ ಆಯ್ತು, ಈಗ ಸ್ವದೇಶಿ ನಿರ್ಮಿತ ವರುಣಾಸ್ತ್ರ ವಿದೇಶಕ್ಕೆ ರಫ್ತು

ಭಾರತದ ದಶಕಗಳ ಕನಸಾಗಿದ್ದ ರಕ್ಷಣಾ ಪರಿಕರಣ ರಫ್ತು ಮಾಡುವ ಕನಸು ಇದೀಗ ನನಸಾಗುತ್ತಿದ್ದು, ಬ್ರಹ್ಮೋಸ್ ಕ್ಷಿಪಣಿ ಬಳಿಕ ಇದೀಗ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಕ್ಷಿಪಣಿ ವರುಣಾಸ್ತ್ರ ವಿದೇಶಕ್ಕೆ ರಫ್ತಾಗುತ್ತಿದೆ...

ನವದೆಹಲಿ: ಭಾರತದ ದಶಕಗಳ ಕನಸಾಗಿದ್ದ ರಕ್ಷಣಾ ಪರಿಕರಣ ರಫ್ತು ಮಾಡುವ ಕನಸು ಇದೀಗ ನನಸಾಗುತ್ತಿದ್ದು, ಬ್ರಹ್ಮೋಸ್ ಕ್ಷಿಪಣಿ ಬಳಿಕ ಇದೀಗ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ  ವಿರೋಧಿ ಕ್ಷಿಪಣಿ ವರುಣಾಸ್ತ್ರ ವಿದೇಶಕ್ಕೆ ರಫ್ತಾಗುತ್ತಿದೆ.

ಕೇಂದ್ರ ಸರ್ಕಾರ ಮತ್ತು ವಿಯೆಟ್ನಾಂ ಸರ್ಕಾರಗಳು ಈ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದು, ಜಲಾಂತರ್ಗಾಮಿ ನೌಕೆಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ವರುಣಾಸ್ತ್ರ ಕ್ಷಿಪಣಿಗಳನ್ನು  ಭಾರತದಿಂದ ಆಮದು ಮಾಡಿಕೊಳ್ಳಲು ವಿಯೆಟ್ನಾಂ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕಳೆದ ಜೂನ್ ನಲ್ಲಿ  ವಿಯೆಟ್ನಾಂ ಪ್ರವಾಸದ ವೇಳೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ವರುಣಾಸ್ತ್ರ ರಫ್ತು ಕುರಿತಂತೆ ವಿಯೆಟ್ನಾಂ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಜುಲೈ  ತಿಂಗಳಾಂತ್ಯದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಒಪ್ಪ೦ದದ ಕುರಿತು ಮತ್ತೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ ಭಾರತದಿಂದ ಗಸ್ತು ತಿರುಗುವ ಬೋಟ್ ಗಳನ್ನು ಕೂಡ ಖರೀದಿಸುವ ಕುರಿತು ವಿಯೆಟ್ನಾಂ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ವಿಯೆಟ್ನಾಂ ಸೈನಿಕರಿಗೆ ಭಾರತದ  ಸ್ವದೇಶಿ ನಿರ್ಮಿತ ಸುಖೋಯ್ ಯುದ್ಧ ವಿಮಾನದಲ್ಲಿ ತರಬೇತಿ ನೀಡುವ ಕುರಿತು ಮಾತುಕತೆ ನಡೆದಿದ್ದು, ಶೀಘ್ರದಲ್ಲಿಯೇ ವಿಯೆಟ್ನಾಂನ ಸೈನಿಕರ ತಂಡ ಭಾರತಕ್ಕೆ ಆಗಮಿಸಿ ಸುಖೋಯ್  30ಎಂಕೆಐ ವಿಮಾನದಲ್ಲಿ ತರಬೇತಿ ಪಡೆಯಲಿದ್ದಾರೆ.

ಭಾರತ ಮತ್ತು ವಿಯೆಟ್ನಾಂ ಎರಡೂ ರಾಷ್ಟ್ರಗಳಿಗೂ ಚೀನಾ ತಲೆನೋವಾಗಿದ್ದು, ಇದೇ ಕಾರಣಕ್ಕಾಗಿ ವಿಯೆಟ್ನಾಂ ಸರ್ಕಾರ ಭಾರತದೊಂದಿಗೆ ವಿವಿಧ ಯೋಜನೆಗಳಲ್ಲಿ ಕೈಜೋಡಿಸುತ್ತಿದೆ. ಇನ್ನು  ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯ ಮುರಿಯಲು ಭಾರತದ ಸಹಾಯಕೋರಿರುವ ವಿಯೆಟ್ನಾಂ ಇದೇ ಕಾರಣಕ್ಕಾಗಿ ಭಾರತದೊಂದಿಗೆ ರಕ್ಷಣಾ ಪರಿಕರಗಳ ವ್ಯಾಪರ ವಹಿವಾಟು  ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನು ಏಷ್ಯಾ ಖಂಡದಲ್ಲಿ ಹೆಚ್ಚಾಗಿ ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿರುವ ಚೀನಾ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಭಾರತಕ್ಕೆ ವಿಯೆಟ್ನಾಂನೊಂದಿಗಿನ ಈ ಒಪ್ಪಂದ ಬಹಳ ಮಹತ್ವದ್ದಾಗಿದ್ದು, ಈ  ಒಪ್ಪಂದದ ಬಳಿಕ ಇತರೆ ರಾಷ್ಟ್ರಗಳು ರಕ್ಷಣಾ ಪರಿಕರಗಳಿಗಾಗಿ ಭಾರತದತ್ತ ಮುಖ ಮಾಡುವ ಸಾಧ್ಯತೆ ಇದೆ.

ವರುಣಾಸ್ತ್ರದ ವಿಶೇಷತೆ ಏನು?


ಇನ್ನು ಪ್ರಸ್ತುತ ವಿಯೆಟ್ನಾಂಗೆ ರವಾನೆಯಾಗುತ್ತಿರುವ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕಾ ವಿರೋಧಿ ಕ್ಷಿಪಣಿ ವರುಣಾಸ್ತ್ರ ಸಂಪೂರ್ಣ ಭಾರತದಲ್ಲೇ ನಿರ್ಮಾಣವಾಗಿದ್ದು, ಡಿಆರ್ ಡಿಒ  ಮತ್ತು ನೌಕಾ ರಕ್ಷಣಾ ಪರಿಕರ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ತಯಾರಿಸಿದ ಕ್ಷಿಪಣಿಯಾಗಿದೆ. ಸುಮಾರು 250 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ವರುಣಾಸ್ತ್ರ  ತನ್ನೊಂದಿಗೆ ಸುಮಾರು 250 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ತೂಕ ಸುಮಾರು 1.25 ಟನ್ ಗಳಾಗಿದ್ದು, ಗಂಟೆಗೆ ಸುಮಾರು 40 ನಾಟಿಕಲ್ ಮೈಲು  ವೇಗದಲ್ಲಿ ಕ್ರಮಿಸುತ್ತದೆ. ಇತ್ತೀಚೆಗಷ್ಟೇ ಈ ಪ್ರಭಾವಿ ಕ್ಷಿಪಣಿಯನ್ನು ನೌಕಾದಳಕ್ಕೆ ಸೇರಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ರಾಜಕೀಯ ಅಂದ್ರೆ ಅದು.... ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಂಸದೆ ರಮ್ಯಾ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

SCROLL FOR NEXT