ದೇಶ

ಬಿಜೆಪಿ ನಾಯಕ ದಯಾಶಂಕರ್ ನಾಲಿಗೆ ಕಟ್ ಮಾಡಿದ್ರೆ 50 ಲಕ್ಷ ಬಹುಮಾನ: ಬಿಎಸ್ಪಿ ನಾಯಕಿ

Lingaraj Badiger
ಚಂಡೀಗಢ: ಬಿಎಸ್ಪಿ ನಾಯಕಿ ಮಾಯಾವತಿ ಅವರು ವೇಶ್ಯೆಗಿಂತಲೂ ಕಡೆ ಎಂದಿದ್ದ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರ ನಾಲಿಗೆ ಕಟ್ ಮಾಡಿದ್ರೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಗುರುವಾರ ಬಿಎಸ್ಪಿ ನಾಯಕಿಯೊಬ್ಬರು ಘೋಷಿಸಿದ್ದಾರೆ.
ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕೆ ದಯಾಶಂಕರ್ ಅವರನ್ನು ಈಗಾಗಲೇ ಬಿಜೆಪಿ, ಉತ್ತರ ಪ್ರದೇಶ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಇತರೆ ಎಲ್ಲಾ ಹುದ್ದೆಗಳಿಂದಲೂ ವಜಾಗೊಳಿಸಿದೆ.
ಈ ಮಧ್ಯೆ ಚಂಡೀಗಢ ಬಿಎಸ್ಪಿ ಘಟಕದ ಮುಖ್ಯಸ್ಥೆ ಜನ್ನತ್ ಜಾಹನ್ ಅವರು ದಯಾಶಂಕರ್ ನಾಲಿಗೆ ಕಟ್ ಮಾಡಿದರೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಮಾಯಾವತಿ ಅವರು ಪಕ್ಷದ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದು, ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಅವರು ಒಬ್ಬ ವೇಶ್ಯಗಿಂತಲೂ ಕಡೆ ಎಂದು ದಯಾಶಂಕರ್ ಸಿಂಗ್ ಹೇಳಿದ್ದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. 
SCROLL FOR NEXT