ಪಿಎಸ್ಐ ಮೇಲೆ ಹಲ್ಲೆ 
ದೇಶ

ಪೊಲೀಸರ ಥಳಿತಕ್ಕೆ ಯುವಕ ಸಾವು: ಉದ್ರಿಕ್ತರಿಂದ ಪೊಲೀಸ್‌ಗೆ ಧರ್ಮದೇಟು

ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಧರ್ಮದೇಟು...

ಸೂರತ್: ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಸೂರತ್ ನಲ್ಲಿ ವರದಿಯಾಗಿದೆ.

ಘಟನೆ ಕುರಿತಂತೆ ಯುವಕನ ಕಡೆಯವರೊಂದಿಗೆ ಚೋಕ್ ಬಜಾರ್ ಠಾಣೆ ಪಿಎಸ್ಐ ವಿಎಸ್ ಪಟೇಲ್ ಚರ್ಚಿಸುತ್ತಿದ್ದಾಗ ಉದ್ರಿಕ್ತ ಗುಂಪು ಏಕಾಏಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 30-50 ಜನರಿಂದ ತಂಡ ಪಿಎಸ್ಐ ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಸದ್ಯ ಗಾಯಗೊಂಡಿರುವ ಪಟೇಲ್ ಅವರನ್ನು ಸೂರತ್ ನ ಸ್ಮಿಮೆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜೂಜಾಡುತ್ತಿದ್ದ ಆರೋಪದ ಮೇಲೆ ಕುಡಿದು ಚಿತ್ತಾಗಿದ್ದ ಯುವಕನೊಬ್ಬನನ್ನು ಪೊಲೀಸರು ಠಾಣೆಗೆ ಕರೆದ್ಯೊಯ್ದು ಥಳಿಸಿದ್ದಾರೆ. ಕಂಠ ಪೂರ್ತಿ ಕುಡಿದಿದ್ದ 25 ವರ್ಷದ ಮಹೇಂದರ್ ಮಕ್ವಾನಾ ಒಂದೇ ಏಟಿಗೆ ಮೃತಪಟ್ಟಿದ್ದು, ಇದರಿಂದ ಕೋಪಗೊಂಡ ಯುವಕನ ಕಡೆಯವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT