ದೇಶ

ದಲಿತರ ಮನೆಯಲ್ಲಿ ಅಮಿತ್ ಶಾ ಭೋಜನ: ಅಡುಗೆ ಮಾಡಿದವರಿಗಾಗಿ ಮಾಯಾವತಿ ಹುಡುಕಾಟ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾರಾಣಸಿಯಲ್ಲಿ ದಲಿತ ಕುಟುಂಬದ ಜೊತೆ ಭೋಜನ ಸವಿದ ಘಟನೆಯನ್ನು ಬಿಎಸ್ ಪಿ ನಾಯಕಿ ಮಾಯಾವತಿ ಗಂಭೀರವಾಗಿ ಸ್ವೀಕರಿಸಿದ್ದಾರೆ.

ಲಖನೌ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾರಾಣಸಿಯಲ್ಲಿ ದಲಿತ ಕುಟುಂಬದ ಜೊತೆ ಭೋಜನ ಸವಿದ ಘಟನೆಯನ್ನು ಬಿಎಸ್ ಪಿ ನಾಯಕಿ ಮಾಯಾವತಿ ಗಂಭೀರವಾಗಿ ಸ್ವೀಕರಿಸಿದ್ದಾರೆ.
ಅಮಿತ್ ಶಾ ದಲಿತ ಕುಟುಂಬದವರೊಂದಿಗೆ ಭೋಜನ ಸವಿದಿದ್ದಾರಾದರೂ, ಅದರ ಬಗ್ಗೆ ಅನುಮಾನ ಹೊಂದಿರುವ ಮಾಯಾವತಿ, ಅಮಿತ್ ಶಾ ಸೇವಿಸಿದ ಆಹಾರವನ್ನು ಸಿದ್ಧಪಡಿಸಿದವರು ದಲಿತರೋ ಅಲ್ಲವೋ ಎಂಬುದನ್ನು ಪತ್ತೆಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಸೂಚನೆ ನೀಡಿದ್ದಾರೆ.
ಟೈಮ್ಸ್ ಅಫ್ ಇಂಡಿಯಾದ ವರದಿ ಪ್ರಕಾರ ಅಮಿತ್ ಶಾ ಸೇವಿಸಿದ ಆಹಾರವನ್ನು ತಯಾರು ಮಾಡಿದವರು ದಲಿತರಲ್ಲ ಬದಲಾಗಿ ಮೇಲ್ವರ್ಗಕ್ಕೆ ಸೇರಿದವರೆಂದು ಮಾಯಾವತಿ ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಅಡುಗೆ ಮಾಡಿದವರಿಗಾಗಿ ಹುಡುಕುತ್ತಿದ್ದಾರೆ ಎಂಬ ವರದಿ ಪ್ರಕಟವಾಗಿದೆ. ಅಮಿತ್ ಶಾ ಅವರೊಂದಿಗೆ ವಾರಾಣಸಿ ದಲಿತ ಕುಟುಂಬದ ಮನೆಗೆ 250 ಜನರು ಭೇಟಿ ನೀಡಿದ್ದರು. ಈ ಪೈಕಿ 50 ಜನರು ಮಾತ್ರವೇ ಭೋಜನ ಸವಿದರು. ಇದು ಅವರ ಜಾತೀಯತೆ ಪರವಾದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಎಸ್ ಪಿ ನಾಯಕ ಡಾ. ರಾಮ್ ಕುಮಾರ್ ಕುರೀಲ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT