ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ! 
ದೇಶ

ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ!

ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ

ಕೊಚ್ಚಿ: ಬ್ರಿಟನ್ (ಯುಕೆ) ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಆರ್ಥಿಕ-ಸಾಮಾಜಿಕ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ ಎಂದು ಹೇಳಲಾಗುತ್ತಿದೆ.

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ಬಂದ ನಂತರ ಬ್ರಿಟನ್ ನಲ್ಲಿ ಇಂಗ್ಲಿಷ್ ಪ್ರಾಧಾನ್ಯತೆ ಮತ್ತಷ್ಟು ಹೆಚ್ಚಿದ್ದು, ಯುರೋಪಿಯನ್ ಒಕ್ಕೂಟದಲ್ಲಿ ಇಂಗ್ಲಿಷ್ ಗೆ ಪ್ರಾಧಾನ್ಯತೆ ನೀಡದ ಇತರ ದೇಶಗಳಿಗಿಂತ ಇಂಗ್ಲಿಷ್ ಮಾತನಾಡುವ ಭಾರತೀಯರಿಗೆ ಬ್ರಿಟನ್ ನಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ರಿಟನ್ ನಲ್ಲಿ ಮೈಕ್ರೋಸಾಫ್ಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜೇಮ್ಸ್ ಜೋಸೆಫ್ ಎಂಬುವವರು ಈ ಬಗ್ಗೆ ಮಾತನಾಡಿದ್ದು, ಬ್ರಿಟನ್ ನ ಆರೋಗ್ಯ, ಐಟಿ ಕ್ಷೇತ್ರಗಳಲ್ಲಿ ಕೆಲಸಕ್ಕಾಗಿ ಎದುರುನೋಡುತ್ತಿರುವ ಭಾರತೀಯರಿಗೆ ಯುರೋಪಿಯನ್ ಒಕ್ಕೂಟದ ಇತರ ದೇಶಗಳ ನಾಗರೀಕರಿಗಿಂತ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಹೇಳಿದ್ದಾರೆ. ಬ್ರಿಟನ್ ನಲ್ಲಿ ಭಾರತೀಯರಿಗೆ ಉದ್ಯೋಗ ಅವಕಾಶಗಳು ಹೇರಳವಾಗಿ ಸಿಗಲಿವೆಯಾದರೂ,  ಬ್ರಿಟನ್ ನ ಕರೆನ್ಸಿ ಪೌಂಡ್ ನ ಮೌಲ್ಯ ಕುಸಿತವಾಗಿರುವುದರ ಪರಿಣಾಮ ಕಡಿಮೆ ವೇತನ ಸಿಗಲಿದೆ ಎಂಬುದು ಗಾಮನಾರ್ಹ ವಿಷಯವಾಗಿದೆ.  ಬ್ರಿಟನ್ ನಿಂದ ಅತಿ ಹೆಚ್ಚು ವೀಸಾ ಪಡೆಯುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು  2015  ರಲ್ಲಿ ಸುಮಾರು  60,000 ಕ್ಕೂ ಹೆಚ್ಚು ಉದ್ಯೋಗ ವೀಸಾಗಳನ್ನು ಪಡೆದಿದೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ. ಪ್ರಾರಂಭದ ಹಂತದಲ್ಲಿ ಬ್ರೆಕ್ಸಿಟ್ ನಿಂದ ಭಾರತೀಯರ ಉದ್ಯೋಗ ಅವಕಾಶಗಳು ಉತ್ತಮವಾಗಿರಲಿದೆಯಾದರೂ, ಬ್ರೆಕ್ಸಿಟ್ ಪರವಾಗಿ ಚಲಾವಣೆಯಾದ ಮತಗಳು ವಲಸೆ ವಿರುದ್ಧವಾಗಿದ್ದ ಕಾರಣ, ದೀರ್ಘಾವಧಿಯಲ್ಲಿ ಇದರಿಂದ ಭಾರತೀಯರಿಗೆ ಒಳಿತಾಗುವುದಿಲ್ಲ ಎಂಬ ಎಚ್ಚರಿಕೆ ಇರಬೇಕು ಎಂದು ಜಿಯೋಜಿತ್ ಬಿ.ಎನ್.ಪಿ. ಪರೀಬಸ್ ನ ಹೂಡಿಕೆ ತಜ್ಞ ವಿಕೆ ವಿಜಯ್ ಕುಮಾರ್ ವಿಶ್ಲೇಷಿಸಿದ್ದಾರೆ.  ವಲಸೆ ಸಮಸ್ಯೆ ಇಲ್ಲದ ಬ್ರಿಟನ್ ನ ಉತ್ತರ ಐರ್ಲೆಂಡ್, ಸ್ಕಾಟ್ಲೆಂಡ್ ಬ್ರೆಕ್ಸಿಟ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರೆ, ವಲಸೆ ಸಮಸ್ಯೆಗಳನ್ನು ಎದುರಿಸುತ್ತಿರುವ ಬ್ರಿಟನ್ ನ ಪ್ರದೇಶಗಳು ಬ್ರೆಕ್ಸಿಟ್ ಪರವಾಗಿ ಮತ ಚಲಾವಣೆ ಮಾಡಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

IPL 2026: ವಿರಾಟ್ ಕೊಹ್ಲಿ, ಪಡಿಕ್ಕಲ್ ಅಬ್ಬರಕ್ಕೆ GT ತತ್ತರ; RCB ಭರ್ಜರಿ ಗೆಲುವು

ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ

SCROLL FOR NEXT