ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟ ಹಿರಿಯ ನಾಗರೀಕರ ಆದಿಕೇಶ್ವರನ್ 
ದೇಶ

ಟೆಕ್ಕಿ ಸ್ವಾತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಅದೇ ನಿಲ್ದಾಣದಲ್ಲಿ ಸೂಕ್ತ ನೆರವು ಸಿಗದೆ ಹಿರಿಯ ನಾಗರಿಕ ಸಾವು

ಚೆನ್ನೈ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆಯಾಗಿ ಗಂಟೆಗಳ ಬಳಿಕ ಅದೇ ನಿಲ್ದಾಣದಲ್ಲಿ ಹಿರಿಯ ನಾಗರೀಕರೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ತಡವಾಗಿ ಬೆಳಕಿಗೆ...

ಚೆನ್ನೈ: ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆಯಾದ ಗಂಟೆಗಳ ಬಳಿಕ ಅದೇ ನಿಲ್ದಾಣದಲ್ಲಿ ಹಿರಿಯ ನಾಗರೀಕರೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಚೈನ್ನೈನ ನುಂಗಂಬಾಕ್ಕಂ ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಎಸ್. ಸ್ವಾತಿ ಅವರನ್ನು ಧಾರುಣವಾಗಿ ಹತ್ಯೆ ಮಾಡಲಾಗಿತ್ತು. ಹಲ್ಲೆಗೊಳಗಾಗಿ ಸ್ವಾತಿ ನಿಲ್ದಾಣದಲ್ಲಿ ನರಳುತ್ತಿದ್ದರು. ಆಕೆಯ ಬಳಿ ಯಾರೊಬ್ಬರು ಬಂದಿರಲಿಲ್ಲ. ಇದೇ ನಿಲ್ದಾಣಕ್ಕೆ 72 ವರ್ಷದ ಹಿರಿಯ ನಾಗರಿಕ ಆದಿಕೇಶ್ವರನ್ ಎಂಬುವವರು ಬಂದಿದ್ದರು.

ಈ ವೇಳೆ ನಿಲ್ದಾಣದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಸ್ವಾತಿಯವರ ಮೃತದೇಹವನ್ನು ನೋಡಿದ್ದ ಆದಿಕೇಶ್ವರನ್ ಅವರಿಗೆ ಪ್ರಜ್ಞೆ ತಪ್ಪಿದೆ. ಇದರಂತೆ ನೆಲಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ಪರಿಣಾಮ ಆದಿಕೇಶ್ವರ್ ಅವರ ಹಲ್ಲು ಮುರಿದಿದೆ. ಹಿರಿಯ ನಾಗರಿಕರೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಅಲ್ಲಿನ ಜನತೆ ಮಾನವೀಯತೆ ಮರೆತಿದ್ದರು. ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರಿದ್ದರೂ ಯಾರೊಬ್ಬರೂ ಅವರ ನೆರವಿಗೆ ಬಂದಿಲ್ಲ. ಆದಿಕೇಶ್ವರನ್ ಅವರ ಹಲ್ಲು ಮುರಿದಿದ್ದರಿಂದ ಬಾಯಲ್ಲಿ ರಕ್ತ ಚಿಮ್ಮಿತ್ತು.

ಆದಿಕೇಶ್ವರನ್ ಅವರು ಚೂಲೈಮೆಡುವಿನ ಸೌರಾಷ್ಟ್ರ ನಗರದ ನಿವಾಸಿಯಾಗಿದ್ದು, ಪಾತ್ರೆಗಳ ತಯಾರಿಕೆ ಘಟಕವೊಂದರಲ್ಲಿ ಕಾರ್ಮಿಕನಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸ್ವಾತಿ ಹತ್ಯೆಯಾದ ದಿನ ಬೆಳಿಗ್ಗೆ 8.30ಕ್ಕೆ ನುಂಗಂಬಾಕ್ಕಂ ನಿಲ್ದಾಣಕ್ಕೆ ಬಂದಿದ್ದರು ಎಂದು ಆದಿಕೇಶ್ವರನ್ ಅವರ ಪುತ್ರ ಕೋತಂಡರಾಮನ್ ಅವರು ಹೇಳಿದ್ದಾರೆ,

9.20ರ ಸುಮಾರಿಗೆ ನನ್ನ ಸಹೋದರಿಯ ಕರೆ ಬಂದಿತ್ತು. ನಿಲ್ದಾಣದಲ್ಲಿ ಅಪ್ಪ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆಂದು ಹೇಳಿದ್ದರು. ನಿಲ್ದಾಣಕ್ಕೆ ಹೋದಾಗ ಸಾಕಷ್ಟು ಜನರು ನಿಂತಿದ್ದರು. ಈ ವೇಳೆ ಅಪ್ಪ ರೈಲಿಗೆ ಸಿಕ್ಕಿಹಾಕಿಕೊಂಡಿರಬೇಕು ಎಂದುಕೊಂಡಿದ್ದೆ. ಆದರೆ, ಅವರು ಪ್ರಜ್ಞೆ ತಪ್ಪಿಬಿದ್ದಿದ್ದಾರೆಂಬುದು ನಂತರವಷ್ಟೇ ತಿಳಿದಿತ್ತು.

ಮೃತ ದೇಹ ನೋಡಿದ್ದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೋಗಿದ್ದಾರೆ. ಈ ವೇಳೆ ಕುಳಿತುಕೊಳ್ಳಲು ಸಾಧ್ಯವಾಗದೆ ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿ ಪೊಲೀಸರು ಹಾಗೂ ರೈಲ್ವೆ ಇಲಾಖಾ ಅಧಿಕಾರಿಗಳು, ಸಾರ್ವಜನಿಕರಿದ್ದರೂ ಯಾರೊಬ್ಬರು ಅವರ ನೆರವಿಗೆ ಬಾರದಿರುವುದು ನಿಜಕ್ಕೂ ಬೇಸವನ್ನುಂಟು ಮಾಡಿದೆ. ಯಾರೊಬ್ಬರೂ ಅವರಿಗೆ ಪ್ರಾಥಮಿಕ ಚಿಕಿತ್ಸೆಯಾಗಲಿ, ನೀರಾಗಲಿ ನೀಡಿಲ್ಲ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದರು ಎಂದು ಕೋತಂಡರಾಮನ್ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT