ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ 
ದೇಶ

ಯೋಗಕ್ಕೆ 'ಮುಸ್ಲಿಂ ತರಬೇತುದಾರರ ನೇಮಕದ ಮಾಹಿತಿಯನ್ನು ತಿರುಚಲಾಗಿದೆ: ಆಯುಷ್ ಇಲಾಖೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತರಬೇತುದಾರರನ್ನು ಮುಸ್ಲಿಂ ಸಮುದಾಯದಿಂದ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ವರದಿಯನ್ನು ಕೇಂದ್ರ ಆಯುಷ್ ಸಚಿವಾಲಯ ತಳ್ಳಿಹಾಕಿದೆ.

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುಸ್ಲಿಂ ತರಬೇತುದಾರರ  ನೇಮಕದ ಬಗ್ಗೆ ಇಲಾಖೆ ನೀಡಿದ್ದ ಆರ್ ಟಿಐ ಮಾಹಿತಿಯನ್ನು ತಿರುಚಲಾಗಿದೆ ಎಂದು ಆಯುಷ್ ಸಚಿವಾಲಯ ಹೇಳಿದೆ.

2015 ಜೂ.21 ರಂದು ನಡೆದ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ
ಹೊರದೇಶಗಳಿಗೆ ಯೋಗ ಕಲಿಸಲು ನೇಮಕ ಮಾಡಿಕೊಳ್ಳಲಾಗಿದ್ದವರ ಪೈಕಿ ಮುಸ್ಲಿಮ್ ತರಬೇತುದಾರರ ನೇಮಕದ ಬಗ್ಗೆ ಪತ್ರಕರ್ತ ಪುಷ್ಪ್ ಶರ್ಮ ಆರ್ ಟಿಐ ಮಾಹಿತಿ ಕೇಳಿದ್ದರು. ಆರ್ ಟಿಐ ಗೆ ನೀಡಲಾಗಿದ್ದ ಉತ್ತರವನ್ನು ತಿರುಚಿ ವರದಿ ಪ್ರಕಟ ಮಾಡಲಾಗಿದೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮುಸ್ಲಿಮರನ್ನು ನೇಮಕ ಮಾಡಿಕೊಂಡಿಲ್ಲ ಎಂಬ ಉತ್ತರ ನೀಡಿದೆ ಎಂಬ ವರದಿ ಹುಫಿಂಗ್ ಟನ್ ಪೋಸ್ಟ್ ವರದಿ ಮಾಡಿತ್ತು. ವರದಿಯನ್ನು ನಿರಾಕರಿಸಿರುವ ಆಯುಷ್ ಸಚಿವಾಲಯ, ಆರ್ ಟಿಐ ಮಾಹಿತಿಗೆ ಸಚಿವಾಲಯ ನೀಡಿರುವ ಉತ್ತರವನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ವರ್ಚಸ್ಸನ್ನು ಕುಗ್ಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದೆ.
ಆರ್ ಟಿಐ ಮಾಹಿತಿಗೆ ನೀಡಿರುವ ಉತ್ತರದ ಬಗ್ಗೆ ತಪಪು ವರದಿ ಪ್ರಕಟವಾಗಿರುವ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.   ತಪ್ಪು ವರದಿಯನ್ನು ಖಂಡಿಸಿರುವ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿದ್ದು ಟ್ವೀಟ್ ನಲ್ಲಿ ಆರ್ ಟಿಐ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಪತ್ರಕರ್ತ ಪುಷ್ಪ್ ಶರ್ಮಾ ಅವರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರತಿಯನ್ನು ದಾಖಲಿಸಿದೆ. ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸಲು 711 ಮುಸ್ಲಿಂ ಯೋಗ ತರಬೇತುದಾರರು ಅರ್ಜಿ ಸಲ್ಲಿಸಿದ್ದರು, ಈ ಪೈಕಿ ಯಾರನ್ನೂ ಯೋಗ ತರಬೇತುದಾರರಾಗಿ ಆಯ್ಕೆ ಮಾಡಲಾಗಿಲ್ಲ ಎಂದು ಆಯುಷ್ ಇಲಾಖೆ ಹೇಳಿತ್ತು ಎಂದು ಹುಫಿಂಗ್ ಟನ್ ಪೋಸ್ಟ್ ವರದಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT