ಸುಷ್ಮಾ ಸ್ವರಾಜ್ 
ದೇಶ

ಲಿಬಿಯಾ ದಾಳಿಯಲ್ಲಿ ಭಾರತೀಯ ನರ್ಸ್‌ ಹಾಗೂ ಪುತ್ರ ಸಾವು: ಸುಷ್ಮಾ

ಲಿಬಿಯಾದಲ್ಲಿ ಶುಕ್ರವಾರ ನಡೆದ ಷೆಲ್ ದಾಳಿಯಲ್ಲಿ ಕೇರಳದ ನರ್ಸ್‌ ಹಾಗೂ ಆಕೆಯ ಪುತ್ರ ಮೃತಪಟ್ಟಿರುವುದಾಗಿ ಶನಿವಾರ ವಿದೇಶ...

ನವದೆಹಲಿ: ಲಿಬಿಯಾದಲ್ಲಿ ಶುಕ್ರವಾರ ನಡೆದ ಷೆಲ್ ದಾಳಿಯಲ್ಲಿ ಕೇರಳದ ನರ್ಸ್‌ ಹಾಗೂ ಆಕೆಯ ಪುತ್ರ ಮೃತಪಟ್ಟಿರುವುದಾಗಿ ಶನಿವಾರ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ದೃಢಪಡಿಸಿದ್ದಾರೆ.
ನಿನ್ನೆ ಲಿಬಿಯಾದಲ್ಲಿ ನಡೆದ ದಾಳಿಯಲ್ಲಿ ಕೇರಳದ ನರ್ಸ್‌ ಮತ್ತು ಆಕೆಯ ಪುತ್ರ ಮೃತಪಟ್ಟಿರುವ ವರದಿ ಬಂದಿದೆ. ಟ್ರಿಪೋಲಿಯಿಂದ ಸುಮಾರು 45 ಕಿ.ಮೀ. ದೂರದ ಝವೀಯಾ ಎಂಬಲ್ಲಿ ಈ ದುರ್ಘ‌ಟನೆ ನಡೆದಿದೆ' ಎಂದು ಸುಶ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.
ಮೃತಪಟ್ಟವರನ್ನು ನರ್ಸ್‌ ಸುನು ಸತ್ಯನ್‌ ಮತ್ತು ಆಕೆಯ ಪುತ್ರ ಪ್ರಣವ್‌ ಎಂದು ಗುರುತಿಸಲಾಗಿದ್ದು, ಲಿಬಿಯಾದ ಸುಬ್ರತಾ ನಗರದ ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಾಗಿದ್ದರು. ಶುಕ್ರವಾರ ಸಂಜೆ 4 ಗಂಟೆಯ ವೇಳೆ ರಾಕೆಟ್‌ ಉರುಳಿ ಬಿದ್ದ ಕಾರಣ ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಸುಶ್ಮಾ ಸ್ವರಾಜ್‌ ತಿಳಿಸಿದ್ದಾರೆ. 
ಸುನು ಅವರ ಪತಿ ವಿಪಿನ್‌ ಅವರೊಂದಿಗೆ ಭಾರತೀಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದಿರುವ ಸುಶ್ಮಾ, ಝವೀಯಾ ಆಸ್ಪತ್ರೆಯಲ್ಲಿ 26ಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರ ನವರಾತ್ರಿ ದಿನ ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್: ರಾಷ್ಟ್ರ ರಾಜಕಾರಣಕ್ಕೆ 'ಮಹಾ'ಸಿಎಂ; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ !

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

ನೀವೊಬ್ಬರು ಸಚಿವರು...ಹೀಗೆ ಕೇಳಿದ್ರೆ ಹೇಗೆ; ಸಚಿವ ತಿಮ್ಮಾಪುರ ವಿರುದ್ಧ ಡಿಕೆ.ಶಿವಕುಮಾರ್ ಗರಂ

SCROLL FOR NEXT