ಬುದ್ಧ 
ದೇಶ

ಭಾರತದಲ್ಲಿ ಪರಿಶಿಷ್ಟ ಜಾತಿಯವರು ಬೌದ್ಧಮತದತ್ತ ಹೆಚ್ಚೆಚ್ಚು ಒಲವು ತೋರಿಸುತ್ತಿದ್ದಾರೆ

ಸರ್ಕಾರದ ಅಂಕಿ ಅಂಶಗಳ ಪ್ರಕಾರ ದಲಿತರಲ್ಲಿ ಬೌದ್ಧಮತದತ್ತ ಹೆಚ್ಚು ಒಲವು ಪ್ರಕಟವಾಗುತ್ತಿದ್ದು, ದಲಿತ ಹೋರಾಟಗಳು ಬೌದ್ಧಮತ...

ನವದೆಹಲಿ: ಭಾರತದಲ್ಲಿ ಪರಿಶಿಷ್ಟ ಜಾತಿಯವರು ಬೌದ್ಧಮತಕ್ಕೆ ಮತಾಂತರಗೊಳ್ಳಲು ಹೆಚ್ಚು ಒಲವು ತೋರಿಸುತ್ತಿದ್ದಾರಂತೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ದಲಿತರಲ್ಲಿ ಬೌದ್ಧಮತದತ್ತ ಹೆಚ್ಚು ಒಲವು ಪ್ರಕಟವಾಗುತ್ತಿದ್ದು, ದಲಿತ ಹೋರಾಟಗಳು ಬೌದ್ಧಮತ ಮೂಲಕ ಯಶ ಕಾಣುತ್ತಿವೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ. 
ಅಂಕಿ ಅಂಶಗಳ ಪ್ರಕಾರ ಬೌದ್ಧಮತಕ್ಕೆ ಮತಾಂತರಗೊಂಡ ದಲಿತರ ಸಂಖ್ಯೆ 2001ರಲ್ಲಿ 41.59 ಲಕ್ಷ ಇತ್ತು. 2011ರಲ್ಲಿ ಇದು 57. 56 ಲಕ್ಷ ಆಯಿತು. ಅಂದರೆ ಶೇ. 38ರಷ್ಟು  ಹೆಚ್ಚಳ ವಾಗಿದೆ. ಅದೇ ವೇಳೆ ಪರಿಶಿಷ್ಟ ಜಾತಿಯವರ ಜನಸಂಖ್ಯೆಯಲ್ಲಿ ಶೇ.21.3 ಹೆಚ್ಚಳವಾಗಿದ್ದು, 16.6 ಕೋಟಿಯಿದ್ದ ಜನಸಂಖ್ಯೆ 20.14 ಕೋಟಿ ಆಗಿದೆ.
ಮಹಾರಾಷ್ಟ್ರದಲ್ಲಿ ಶೇ.90 ರಷ್ಟು ಪ.ಜಾತಿಯವರು ಬೌದ್ಧಮತ ಅನುಯಾಯಿಗಳಾಗಿದ್ದು,  ಇಲ್ಲಿ 52.04 ಲಕ್ಷ ಬೌದ್ಧಮತೀಯರಿದ್ದಾರೆ. ಅದೇ ವೇಳೆ ಇಲ್ಲಿ ಶೇ. 60 ರಷ್ಟು ಬೌದ್ಧ ಮತೀಯರು ಹೆಚ್ಚಾಗಿದ್ದಾರೆ.
ಏತನ್ಮಧ್ಯೆ, 2001ರಿಂದ 2011ರ ಅವಧಿಯಲ್ಲಿ ಹಿಂದು ಪ. ಜಾತಿಯವರ ಸಂಖ್ಯೆ  15.8 ಕೋಟಿಯಿಂದ 18.9 ಕೋಟಿಯಷ್ಟು ಹೆಚ್ಚಾಗಿದ್ದು, ಇದು ಶೇ. 19.6 ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆ ದಲಿತ ಜನಸಂಖ್ಯೆಯಲ್ಲಿ ಶೇ.83ರಷ್ಟು ಬೌದ್ಧಮತೀಯರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT