ಸೋನಿಯಾಗಾಂಧಿ (ಟಿಎನ್ ಐ ಚಿತ್ರ) 
ದೇಶ

ಭಾರತವೇ ನನ್ನ ಮನೆ, ನನ್ನ ಕೊನೆಯುಸಿರು ಇರುವವರೆಗೂ ಇಲ್ಲೇ ಇರುವೆ: ಸೋನಿಯಾ

ಭಾರತ ದೇಶವೇ ನನ್ನ ಮನೆಯಾಗಿದ್ದು, ನನ್ನ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ನವದೆಹಲಿ: ಭಾರತ ದೇಶವೇ ನನ್ನ ಮನೆಯಾಗಿದ್ದು, ನನ್ನ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ತಿರುವನಂತಪುರಂನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಸೋನಿಯಾಗಾಂಧಿ ಅವರು, ಹೆಲಿಕಾಪ್ಟರ್ ಹಗರಣದಲ್ಲಿ ತಮ್ಮ ಹೆಸರನ್ನು  ಪ್ರಸ್ತಾಪಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡುವ ಬರದಲ್ಲಿ ಗದ್ಗದಿತರಾದರು. "ಭಾರತ ದೇಶದ ಮೇಲಿನ ನನ್ನ ದೇಶನಿಷ್ಠೆ ಮತ್ತು ದೇಶದ ಮೇಲಿನ ಪ್ರೇಮವನ್ನು ಕಿತ್ತುಕೊಳ್ಳಲು ನರೇಂದ್ರ  ಮೋದಿಗೆ ಆಗದು. ಇಟಲಿಯಲ್ಲಿ  ನನ್ನ ಬಂಧುಗಳು ಇದ್ದು, 93 ವರ್ಷದ ನನ್ನ ತಾಯಿಯೂ ಇದ್ದಾರೆ. ಅದಕ್ಕೆ ಎಂದೂ ನಾನು ನಾಚಿಕೆಪಟ್ಟುಕೊಳ್ಳಲಾರೆ. ನಾನು ಭಾರತಕ್ಕೆ 48 ವರ್ಷಗಳ ಹಿಂದೆ  ಬಂದೆ. ಅಂದಿನಿಂದ ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆಯಾಗಿದ್ದು, ಇಲ್ಲೇ ನಾನು ನನ್ನ ಕೊನೆಯುಸಿರು ಎಳೆಯುತ್ತೇನೆ ಎಂದು ಸೋನಿಯಾ ಹೇಳಿದರು.

ಭಾರತ ದೇಶ ನನ್ನ ಪ್ರೀತಿ ಪಾತ್ರ ದೇಶವಾಗಿದ್ದು, ನಾನು ಭಾರತದಲ್ಲೇ ಸಾಯುತ್ತೇನೆ. ನನ್ನ ಅಸ್ಥಿಯೂ ಭಾರತದ ಮಣ್ಣಿನಲ್ಲೇ ವಿಲೀನಗೊಳ್ಳುತ್ತದೆ. ಭಾರತದೊಂದಿಗಿನ ಬಾಂಧವ್ಯವನ್ನು ಪ್ರಧಾನಿ  ಮೋದಿ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದು ಗೊತ್ತು. ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್‌ನವರು ನನ್ನನ್ನು ಯಾವಾಗಲೂ ಬೈಯುತ್ತಿರುತ್ತಾರೆ. ಹೀಯಾಳಿಸುತ್ತಾರೆ. ನನ್ನನ್ನು ಕಪಟ  ನಾಟಕದ ರಾಯಭಾರಿ ಎಂದು ಛೇಡಿಸುತ್ತಾರೆ. 48 ವರ್ಷಗಳಿಂದ ಇವರು ಇದೇ ಕೆಲಸ ಮಾಡುತ್ತಾ ಬಂದಿದ್ದಾರೆ' ಎಂದು ಸೋನಿಯಾ ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ಹಾಗೂ ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ನನಗೆ ಇಟಲಿಯಲ್ಲಿ ಕುಟುಂಬವಿಲ್ಲ. ನಾನು ಅಲ್ಲಿಗೆ ಹೋಗೇ ಇಲ್ಲ ಎಂದು ಪರೋಕ್ಷವಾಗಿ  ಸೋನಿಯಾ ಗಾಂಧಿ ಅವರ ಕಾಲೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!