ಶಿವಸೇನಾ 
ದೇಶ

ಕೇರಳದಲ್ಲಿ ಬಿಜೆಪಿಯನ್ನು ಬಹಿಷ್ಕರಿಸಲು ಶಿವಸೇನೆ ಕರೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಿ ಎಂದು ಶಿವಸೇನೆ ಕೇರಳದ ಮತದಾರರಿಗೆ ಕರೆ ನೀಡಿದೆ. ಕೇರಳವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ...

ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಿ ಎಂದು ಶಿವಸೇನೆ ಕೇರಳದ ಮತದಾರರಿಗೆ ಕರೆ ನೀಡಿದೆ. 
ಕೇರಳವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಹೊಂದಿದ್ದರೂ, ಕೇರಳವನ್ನು ಪ್ರಧಾನಿ ನರೇಂದ್ರ ಮೋದಿ ಸೊಮಾಲಿಯಾಗೆ ಹೋಲಿಸಿದ್ದಾರೆ. ಆದ್ದರಿಂದ ಕೇರಳದ ಮತದಾರರು ಬಿಜೆಪಿಯನ್ನು ಬಹಿಷ್ಕರಿಸಬೇಕೆಂದು ಕೇರಳ ರಾಜ್ಯ ಪ್ರಮುಖ್ ಎಂಎಸ್ ಭುವನೇಂದ್ರನ್ ಹೇಳಿದ್ದಾರೆ.
ಮೋದಿಯವರು ಕೇರಳವನ್ನು ಸೊಮಾಲಿಯಾಗೆ ಹೋಲಿಸುವ ಮೂಲಕ ಕೇರಳಿಗರನ್ನು ಅವಮಾನಿಸಿದ್ದಾರೆ. ಆದ್ದರಿಂದ ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿರುವುದಾಗಿ  ಭುವನೇಂದ್ರನ್ ತಿಳಿಸಿದ್ದಾರೆ.
ಒಂದು ವೇಳೆ ಕೇರಳಿಗರು ಬಿಜೆಪಿಯನ್ನು ಅಧಿಕಾರಕ್ಕೇರಿಸಿದರೆ ಅವರು ಶಬರಿಮಲೆ ಕ್ಷೇತ್ರದಲ್ಲಿನ ಸಂಪ್ರದಾಯಗಳಲ್ಲಿ ಬದಲಾವಣೆಯನ್ನು ತರಬಹುದು. ಅಷ್ಟೇ ಅಲ್ಲದೆ ತ್ರಿಶ್ಶೂರ್ ಪೂರಂ ಸೇರಿದಂತೆ ಇನ್ನೂ ಕೆಲವು ಆಚರಣೆಗಳನ್ನು ಬದಲಾವಣೆ ತರಬಹುದು. ಇದೆಲ್ಲವನ್ನೂ ಕೇರಳದ ಜನ ಸಾಮಾನ್ಯರು ಒಪ್ಪುವುದಿಲ್ಲ. ಆದ್ದರಿಂದ ಬಿಜೆಪಿಯನ್ನು ಬಹಿಷ್ಕರಿಸುವ ಮೂಲಕ ಕೇರಳಿಗರು ಪಾಠ ಕಲಿಸಬೇಕೆಂದು ಶಿವಸೇನೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO ಸಭೆ: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಕನ್ನಡ ಕಲಿಯಲು ಯತ್ನ, ಎಲ್ಲಾ ಭಾಷೆ, ಸಂಪ್ರದಾಯಗಳ ಬಗ್ಗೆ ಗೌರವ ಇದೆ: ರಾಷ್ಟ್ರಪತಿ ಮುರ್ಮು

Kiccha47 Title: Max ಆಯ್ತು, ಈಗ ಸುದೀಪ್ Mark ಅವತಾರ!

ಪಂಚಶೀಲ ಒಪ್ಪಂದಗಳ ಹಾದಿಯಲ್ಲಿ ಸಾಗಿಬಂದ ಭಾರತ – ಚೀನಾ ಸಂಬಂಧಗಳತ್ತ ಒಂದು ನೋಟ (ಜಾಗತಿಕ ಜಗಲಿ)

ನಾಳೆ ಮಧ್ಯಾಹ್ನದೊಳಗೆ ಮುಂಬೈನ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಿ: ಜಾರಂಗೆಗೆ ಬಾಂಬೆ ಹೈಕೋರ್ಟ್

SCROLL FOR NEXT