ಸಾಂದರ್ಭಿಕ ಚಿತ್ರ 
ದೇಶ

ವರದಕ್ಷಿಣೆ ಕಿರುಕುಳ: ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪತಿ

ರೆಹಾನಾ ಬೀವಿ ಎಂಬಾಕೆಗೆ ಆಕೆಯ ಪತಿ ಆಜಾದ್ ಶೇಖ್ ಈ ರೀತಿಯ ಕಿರುಕುಳ ನೀಡಿದ್ದಾನೆ. ರು. 50,000 ನಗದು ಹಣವನ್ನು ವರದಕ್ಷಿಣೆ ತರುವಂತೆ ಶೇಖ್ ...

ಕೊಲ್ಕತ್ತಾ: ವರದಕ್ಷಿಣೆ ಕಿರುಕುಳ ನೀಡಿ 21ರ ಹರೆಯದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಅತ್ತೆ ಬಿಸಿ ನೀರು ಎರಚಿದ ಘಟನೆ ಶುಕ್ರವಾರ ಮಾಲ್ಡಾದಲ್ಲಿ ನಡೆದಿದೆ.
ರೆಹಾನಾ ಬೀವಿ ಎಂಬಾಕೆಗೆ ಆಕೆಯ ಪತಿ ಆಜಾದ್ ಶೇಖ್ ಈ ರೀತಿಯ ಕಿರುಕುಳ ನೀಡಿದ್ದಾನೆ. ರು. 50,000 ನಗದು ಹಣವನ್ನು ವರದಕ್ಷಿಣೆ ತರುವಂತೆ ಶೇಖ್ ರೆಹಾನಳನ್ನು ಪೀಡಿಸುತ್ತಿದ್ದು, ಹಣ ಹೊಂದಿಸಲಾಗದೇ ಸೋತ ರೆಹಾನಾಳ ಮೇಲೆ ಕುದಿಯುತ್ತಿರುವ ನೀರನ್ನು ಎರಚಿದ್ದಾನೆ.
ರೆಹನಾ ದೇಹದಲ್ಲಿ ಶೇ. 70 ರಷ್ಟು ಸುಟ್ಟಗಾಯಗಳಾಗಿದ್ದು, ಈಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ರೆಹಾನಾಳಿಗೆ ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಮದುವೆಯ ವೇಳೆ   ರು. 15,000 ನಗದು, ಚಿನ್ನ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಗಿತ್ತು. ಮದುವೆಯ ನಂತರವೂ ಇನ್ನಷ್ಟು ವರದಕ್ಷಿಣೆ ತರುವಂತೆ ರೆಹಾನಾಳಿಗೆ ಒತ್ತಾಯಿಸುತ್ತಿದ್ದರೆಂದು ರೆಹಾನಾಳ ಕುಟುಂಬ ಹೇಳಿದೆ.
ಐದು ವರ್ಷಗಳ ಹಿಂದೆ ರೆಹಾನಾ ಮತ್ತು ಆಜಾದ್‌ರ ಮದುವೆಯಾಗಿದ್ದು, ಈ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT