ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ 
ದೇಶ

ದಲಿತರ ಜೊತೆ ಭೋಜನ: ಅಮಿತ್ ಷಾ ಜಾತಿ ತಾರತಮ್ಯ ಮಾಡುತ್ತಿದ್ದಾರೆ- ಅಖಿಲೇಶ್

ವಾರಣಾಸಿಯಲ್ಲಿ ದಲಿತ ಕುಟುಂಬದವರ ಜೊತೆ ಭೋಜನ ಸವಿಯುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕ್ರಮವನ್ನು...

ಲಕ್ನೋ: ವಾರಣಾಸಿಯಲ್ಲಿ ದಲಿತ ಕುಟುಂಬದವರ ಜೊತೆ ಭೋಜನ ಸವಿಯುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕ್ರಮವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಅಮಿತ್ ಶಾ ಅವರು ಜಾತಿ ತಾರತಮ್ಯ ಮಾಡುತ್ತಿದ್ದು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ದಲಿತರನ್ನು ಓಲೈಸಲು ಹೊರಟಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮ್ಮ ಪಕ್ಷ ರಾಜ್ಯದಲ್ಲಿ ಮಾಡಿರುವ ಕೆಲಸ, ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಮತಯಾಚನೆ ಮಾಡುತ್ತದೆ. ಇತ್ತೀಚೆಗೆ ನಾನು ಕೂಡ ಕಾರ್ಮಿಕರೊಂದಿಗೆ ಭೋಜನ ಸವಿದಿದ್ದೆ. ಆದರೆ ಜಾತಿಯಾಧಾರದಲ್ಲಿ ತಾರತಮ್ಯ ಮಾಡಿಲ್ಲ. ನಿಮ್ಮಲ್ಲಿ ಭಾವಚಿತ್ರವಿದ್ದರೆ ನೀವು ಕಂಡುಹಿಡಿಯಿರಿ, ಅಂದು ನನ್ನ ಪಕ್ಕ ಕುಳಿತು ಭೋಜನ ಸವಿದ ಕಾರ್ಮಿಕರು ಯಾವ ಜಾತಿಗೆ ಸೇರಿದವರೆಂದು ಎಂದು ಸುದ್ದಿಗಾರರಲ್ಲಿ ಮಾತನಾಡುತ್ತಾ ಹೇಳಿದರು.

ಅಂದು ನನ್ನ ಜೊತೆ ಕುಳಿತು ಊಟ ಮಾಡಿದ ಕಾರ್ಮಿಕರು ಮಿನರಲ್ ನೀರು ಕುಡಿಯುವುದು, ಮಟನ್, ಚಿಕನ್ ತಿನ್ನುವುದನ್ನು ತೋರಿಸಿದ್ದಕ್ಕೆ ಮಾಧ್ಯಮದವರಿಗೆ ಧನ್ಯವಾದಗಳು. ಜಾತಿ, ಮತದ ಆಧಾರದಲ್ಲಿ ನಾವು ವಿಷಯಗಳನ್ನು ನೋಡುವುದಿಲ್ಲ. ಕೆಲಸ, ಸಾಧನೆಯಿಂದ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಅಖಿಲೇಶ್ ಯಾದವ್ ಹೇಳಿದರು.

ಅಮಿತ್ ಶಾ ಇಂದು, ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ದಲಿತರಾದ ಗಿರಿಜಾ ಪ್ರಸಾದ್ ಬಿಂದ್ ಮತ್ತು ಇಕ್ಬಾಲ್ ಬಿಂದ್ ಅವರ ಮನೆಯಲ್ಲಿ ಭೋಜನ ಸವಿಯಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT