ಸಾಂದರ್ಭಿಕ ಚಿತ್ರ 
ದೇಶ

ಗುರುತು ಪತ್ರವಿಲ್ಲದೆ 6 ಲಕ್ಷ ರೂ ವಿನಿಮಯ: ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕೇಸು ದಾಖಲು

ಅಪಮೌಲ್ಯಗೊಂಡ 500, 1000 ಮುಖಬೆಲೆಯ 6 ಲಕ್ಷ ರೂಪಾಯಿಗಳನ್ನು ಗುರುತು ಪತ್ರವಿಲ್ಲದೆ...

ಹೈದರಾಬಾದ್: ಅಪಮೌಲ್ಯಗೊಂಡ 500, 1000 ಮುಖಬೆಲೆಯ 6 ಲಕ್ಷ ರೂಪಾಯಿಗಳನ್ನು ಗುರುತು ಪತ್ರವಿಲ್ಲದೆ ವಿನಿಮಯ ಮಾಡಿಕೊಂಡದ್ದಕ್ಕಾಗಿ ಇಬ್ಬರು ಬ್ಯಾಂಕ್ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೈದರಾಬಾದಿನ ಸರೂರ್ ನಗರ್ ನ ಸಿಂಡಿಕೇಟ್ ಬ್ಯಾಂಕ್ ನ ಕಮಲಾ ನಗರ ಶಾಖೆಯ ವ್ಯವಸ್ಥಾಪಕರು ಇಬ್ಬರು ನೌಕರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿ.ಮಲ್ಲೇಶ್ ಎಂಬ ಕ್ಲರ್ಕ್ 1000 ಮತ್ತು 500 ರೂಪಾಯಿಗಳ ನೋಟುಗಳನ್ನು ಕ್ಯಾಶಿಯರ್ ರಾಧಿಕಾ ಅವರಿಗೆ ಕೊಟ್ಟು 2000 ರೂಪಾಯಿಗಳ ಹೊಸ ನೋಟುಗಳನ್ನು ಪಡೆದುಕೊಂಡರು. ಬ್ಯಾಂಕಿನ ವ್ಯವಸ್ಥಾಪಕರು ತನಿಖೆ ನಡೆಸುವಾಗ ಗುರುತು ಪತ್ರವಿಲ್ಲದೆ ಇವರು ವ್ಯವಹಾರ ನಡೆಸಿರುವುದು ಗೊತ್ತಾಯಿತು. ಸರೂರ್ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ವಿಶ್ವಾಸ ವಂಚನೆ ಕೇಸು ದಾಖಲಾಗಿದೆ.
ಸೇವೆಯಿಂದ ವಜಾಗೊಂಡ ನಂತರ ಮಲ್ಲೇಶ್ 5.6 ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ತಂದುಕೊಟ್ಟು ಉಳಿದ ಹಣವನ್ನು ಖರ್ಚು ಮಾಡಿರುವುದಾಗಿ ಹೇಳಿದ್ದಾರೆ.
ಅಷ್ಟೊಂದು ಹಣ ಮಲ್ಲೇಶ್ ಗೆ ಎಲ್ಲಿಂದ ಬಂತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  
ರಿಸರ್ವ್ ಬ್ಯಾಂಕ್ ನಿಯಮ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 4 ಸಾವಿರ ರೂಪಾಯಿಗಳವರೆಗೆ ಆಧಾರ್ ಕಾರ್ಡ್ ಅಥವಾ ಇತರ ಗುರುತು ಪತ್ರ ನೀಡಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT