ನವದೆಹಲಿ: 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಭತ್ಯೆಗಳ ಬಗ್ಗೆ ಪರಾಮರ್ಶೆ ನಡೆಸಲು ಸ್ಥಾಪಿಸಿರುವ ಸಮಿತಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಭತ್ಯೆಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಭತ್ಯೆಗಳ ಕುರಿತ ಸಮಿತಿಯ ಪ್ರಮುಖ ಸಭೆ ಇಂದು ನಡೆಯಿತು. ಇಂದಿನ ಸಭೆಯಲ್ಲಿ ಎಲ್ಲಾ ಭತ್ಯೆಗಳು ಅಥವಾ ಕೆಲವೊಂದನ್ನು ಅಂತಿಮಗೊಳಿಸಿರುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ಕಾರ್ಯದ ಪ್ರಧಾನ ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ.ಸಭೆ ಮೊನ್ನೆ 16ರಂದು ನಡೆದಿತ್ತು.
ಹಣಕಾಸು ಕಾರ್ಯದರ್ಶಿ ಅಶೋಕ್ ಲವಸ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದ್ದು ಅದು 7ನೇ ವೇತನ ಆಯೋಗದ ಪ್ರಸ್ತಾಪಗಳನ್ನು ಸಲ್ಲಿಸುವಂತೆ ತನ್ನ ಅಭಿಪ್ರಾಯಗಳನ್ನು ಸಲ್ಲಿಸಲು ತಿಳಿಸಿತ್ತು. ಸಮಿತಿ ತನ್ನ ಮೊದಲ ಸಭೆಯನ್ನು ಜುಲೈ 22ರಂದು ನಡೆಸಿತ್ತು ಮತ್ತು ಅದರ ಕೆಲಸವನ್ನು ಪೂರ್ಣಗೊಳಿಸಲು 4 ತಿಂಗಳ ಕಾಲಾವಕಾಶ ನಿಗದಿಪಡಿಸಿತ್ತು.