ಅರುಣ್ ಶೌರಿ 
ದೇಶ

ನೋಟು ನಿಷೇಧಕ್ಕೆ ಅರುಣ್ ಶೌರಿ ವಿರೋಧ: ಆತ್ಮಹತ್ಯೆ ಮಾಡಿಕೊಳ್ಳುವುದು ದಿಟ್ಟ ನಿರ್ಧಾರವೇ?

500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ...

ನವದೆಹಲಿ: 500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ. 
ನೋಟುಗಳ ನಿಷೇಧದ ಉದ್ದೇಶ ಒಳ್ಳೆಯದಿರಬಹುದು ಆದರೆ ಸರಿಯಾಗಿ ಯೋಜಿಸಿಲ್ಲ ಎಂದು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶೌರಿ ಆರೋಪಿಸಿದ್ದು, ಬಾವಿಗೆ ಬೀಳುವುದೂ ದಿಟ್ಟ ನಿರ್ಧಾರ. ಆತ್ಮಹತ್ಯೆ ಮಾಡಿಕೊಳ್ಳುವುದೂ ದಿಟ್ಟ ನಿರ್ಧಾರವೇ ಎಂದು ಪ್ರಶ್ನಿಸಿದ್ದಾರೆ. 
ನೋಟುಗಳ ನಿಷೇಧ ಮಾಡುವುದರಿಂದ ಕಪ್ಪು ಹಣ ನಿಗ್ರಹಿಸಬಹುದು ಎಂದು ಸರ್ಕಾರ ತಪ್ಪು ಕಲ್ಪನೆ ಹೊಂದಿದೆ. ಸರ್ಕಾರ ಏನಾದರೂ ಮಾಡಬೇಕೆಂದಿದ್ದರೆ ಮೊದಲು ತೆರಿಗೆ ಆಡಳಿತದ ವಿಚಾರದಲ್ಲಿ ಸುಧಾರಣೆ ತಂದು ನಂತರ ಮಾಡಬಹುದಾಗಿತ್ತು ಎಂದು ಶೌರಿ ಹೇಳಿದ್ದಾರೆ. 
ಕಪ್ಪುಹಣವನ್ನು ಜನರು ಕ್ಯಾಷ್ ರೂಪದಲ್ಲಿ ಇಟ್ಟುಕೊಳ್ಳುವುದಿಲ್ಲ. ವಿದೇಶದಲ್ಲಿ ಕಪ್ಪುಹಣವನ್ನು ಇಟ್ಟಿರುತ್ತಾರೆ. ಅದು ಡಾಲರ್ ನೋಟ್ ನಲ್ಲೋ ಅಥವಾ ಗನ್ನಿಬ್ಯಾಗ್ ಗಳಲ್ಲೋ ಎಂಬುದು ತಿಳಿದಿರಲಿ. ಆಸ್ತಿ, ಆಭರಣ ಸ್ಟಾಕ್ ಮಾರ್ಕೆಟ್ ಅಥವಾ ಬೇರೆ ಇನ್ಯಾವುದೋ ರೂಪದಲ್ಲಿ ಕಪ್ಪುಹಣ ವಿದೇಶಗಳಲ್ಲಿ ಅಡಗಿಕೊಂಡಿರುತ್ತದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT