ನೋಟು ನಿಷೆಧ: ಹಣದ ತುರ್ತು ಅಗತ್ಯ ಇರುವವರಿಗೆ ಕೇರಳದ ಚರ್ಚ್ ನಿಂದ ಸಹಾಯ 
ದೇಶ

ನೋಟು ನಿಷೆಧ: ಹಣದ ತುರ್ತು ಅಗತ್ಯ ಇರುವವರಿಗೆ ಕೇರಳದ ಚರ್ಚ್ ನಿಂದ ಸಹಾಯ

500, 1೦೦೦ ರೂ ನೋಟುಗಳ ನಿಷೇಧದ ನಿರ್ಧಾರದಿಂದ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ಕೇರಳದ ಚರ್ಚ್ ಒಂದು ಮುಂದಾಗಿದೆ.

ಕೊಚ್ಚಿ: 500, 1೦೦೦ ರೂ ನೋಟುಗಳ ನಿಷೇಧದ ನಿರ್ಧಾರದಿಂದ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ಕೇರಳದ ಚರ್ಚ್ ಒಂದು ಮುಂದಾಗಿದೆ. 
ನೋಟು ನಿಷೇಧದಿಂದ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಂಗ್ರಹ ನಿಧಿಯಿಂದ ಧನ ಸಹಾಯ ಮಾಡುವುದಾಗಿ ಕೇರಳದ ಎರ್ನಾಕುಲಂ ನಲ್ಲಿರುವ ಸೆಂಟ್ ಡೀ ಪೋರ್ರೆಸ್ ಚರ್ಚ್ ಘೋಷಿಸಿದೆ.  ನೋಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹಣದ ತುರ್ತು ಅಗತ್ಯವಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಂಗ್ರಹ ನಿಧಿಯಿಂದ ಚರ್ಚ್ ಸಹಾಯ ಮಾಡಲು ಮುಂದಾಗಿದೆ. 
ಈ ಘೋಷಣೆ ಮಾಡಿರುವ ಚರ್ಚ್ ನ ವ್ಯಾಪ್ತಿಯಲ್ಲಿ 200 ಕುಟುಂಬಳಿದ್ದು, ಈ ಪೈಕಿ ಬಹುತೇಕ ಕುಟುಂಬಗಳು ಬ್ಯಾಂಕ್ ಗಳಲ್ಲಿ ಸರಿಯಾದ ಠೇವಣಿ ಹೊಂದಿಲ್ಲದೇ ಇರುವ ಕುಟುಂಬಳಾಗಿವೆ ಅಥವಾ ಎಟಿಎಂ ಬಳಕೆ ವಿಧಾನ ತಿಳಿಯದೇ ಇರುವ ಕುಟುಂಬಗಳಾಗಿವೆ. 500, 1000 ರೂ ನೋಟುಗಳು ನಿಷೇಧವಾದಾಗಿನಿಂದ ಇಂತಹ ಕುಟುಂಬಗಳು ಹಣಕ್ಕಾಗಿ ಪರದಾಡುವ ಸ್ಥಿತಿ ಎದುರಿಸುತ್ತಿವೆ ಎಂದು ಚರ್ಚ್ ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. 
ಹಣದ ತುರ್ತು ಅಗತ್ಯ ಎದುರಿಸುತ್ತಿರುವವರು ಚರ್ಚ್ ನ ಸಂಗ್ರಹ ನಿಧಿಯಿಂದ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ನಂತರ ತಮಗೆ ಅನುಕೂಲವಾದಾಗ ಅದನ್ನು ವಾಪಸ್ ನೀಡಬಹುದಾಗಿದೆ ಎಂದು ಚರ್ಚ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಚರ್ಚ್ ನ ಸಂಗ್ರಹ ನಿಧಿ ಬಾಕ್ಸ್ ನ್ನು ಆರು ತಿಂಗಳಿಗೆ ಒಮ್ಮೆ ತೆರೆಯಲಾಗುತ್ತದೆ, ನ.20 ರಂದು ಬಾಕ್ಸ್ ನ್ನು ತೆರೆದಾಗ ಅದರಲ್ಲಿ 500, 1000 ರೂ ರ ನೋಟುಗಳು ಕೆಲವೇ ಕೆಲವು ಇದ್ದಿದ್ದು ಕಂಡುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT