ಮಧನ್ 
ದೇಶ

ಎಸ್ ಆರ್ ಎಂ ವಂಚನೆ ಕೇಸ್: ತಲೆಮರೆಸಿಕೊಂಡಿದ್ದ ಚಿತ್ರ ನಿರ್ಮಾಪಕ ಮಧನ್ ಬಂಧನ

ಎಸ್ ಆರ್ ಎಂ ವಂಚನೆ ಪ್ರಕರಣ ಸಂಬಂಧ ಕಳೆದ ಕೆಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ತಮಿಳು ಚಿತ್ರ ನಿರ್ಮಾಪಕ...

ಚೆನ್ನೈ: ಎಸ್ ಆರ್ ಎಂ ವಂಚನೆ ಪ್ರಕರಣ ಸಂಬಂಧ ಕಳೆದ ಕೆಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ತಮಿಳು ಚಿತ್ರ ನಿರ್ಮಾಪಕ ಎಸ್ ಮಧನ್ ಅವರನ್ನು ಪೊಲೀಸರು ಸೋಮವಾರ ಕಡೆಗೂ ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಮಧನ್ ರನ್ನು ಇಂದು ತಮಿಳುನಾಡಿನ ತಿರುಪುರದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯದಲ್ಲೇ ಈ ಕುರಿತು ಚೆನ್ನೈ ಹಿರಿಯ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಹಲವು ದಿನಗಳಿಂದ ಆರೋಪಿಯನ್ನು ಬಂಧಿಸಲು ವಿಫಲವಾಗಿದ್ದ ಪೊಲೀಸರನ್ನು ಮದ್ರಾಸ್ ಹೈಕೋರ್ಟ್ ಹಲವು ಬಾರಿ ತರಾಟೆಗೆ ತೆಗೆದುಕೊಂಡಿತ್ತು. 
ವೈದ್ಯಕೀಯ ಸೀಟು ನೀಡುವುದಾಗಿ ಭರವಸೆ ನೀಡಿ ವಿದ್ಯಾರ್ಥಿಗಳಿಂದ ಕೋಟ್ಯಾಂತರ ರುಪಾಯಿ ಪಡೆದು ವಂಚಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಸ್ ಆರ್ ಎಂ ಸಮೂಹದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿಆರ್ ಪಚ್ಚಮುತ್ತು ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದ ಆರೋಪ ಎದುರಿಸುತ್ತಿರುವ ಎಸ್ ಮಧನ್ ಅವರ ವಿರುದ್ಧ ಸುಮಾರು 120 ಪೋಷಕರು ವಂಚನೆ ಕೇಸ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುತಾಕಿ ಭಾರತ ಭೇಟಿ ನಡುವೆ ಅಫ್ಘಾನ್ ಗಡಿಯಲ್ಲಿ ಮಾರಣಹೋಮ: 23 ಪಾಕ್ ಸೈನಿಕರು, 200 ತಾಲಿಬಾನ್ ಗಳ ಹತ್ಯೆ!

ಅಧಿಕಾರದ ಅಮಲು ನೆತ್ತಿಗೇರಿದೆ, ಚುನಾಯಿತ ಶಾಸಕರನ್ನು ಕರಿಟೋಪಿ MLA ಎಂದು ಸಂಬೋಧಿಸುವುದು ಎಷ್ಟು ಸರಿ?

Bengaluru: ಹಾಲಿನ ಅಂಗಡಿಗೆ ನುಗ್ಗಿ, ಮಾಲೀಕನಿಗೆ ಚಪ್ಪಲಿಯಿಂದ ಮನಬಂದಂತೆ ಹಲ್ಲೆ, ಬಿಹಾರ ಮೂಲದ ರೌಡಿ ಅಂದರ್! Video

6 ಎಕರೆಯಲ್ಲ, ಲಾಲ್‌ಬಾಗ್‌ನ 6 ಇಂಚು ಜಾಗ ಕಸಿಯಲು ಬಿಡಲ್ಲ: ಸುರಂಗ ಮಾರ್ಗಕ್ಕೆ ಭೂವೈಜ್ಞಾನಿಕ ವರದಿ ಅಗತ್ಯ; ತೇಜಸ್ವಿ ಸೂರ್ಯ

ನನಗೂ ಸಿಎಂ ಆಗುವ ಬಯಕೆಯಿದೆ: ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT