ಸಂಗ್ರಹ ಚಿತ್ರ 
ದೇಶ

ಪಂಜರ ಬಿಟ್ಟು ಹೊರ ಬಂದ ಹೆಣ್ಣು ಹುಲಿ; ಕಂಗಾಲಾದ ಪ್ರವಾಸಿಗರು!

ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಇಂದೋರ್: ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಭಾನುವಾರ ರಜೆ ದಿನವಾದ್ದರಿಂದ ಇಂದೋರ್ ನಲ್ಲಿರುವ ಕಮ್ಲಾ ನೆಹರೂ ಪ್ರಾಣಿ ಸಂಗ್ರಹಾಲಯಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಪಂಜರದೊಳಿದ್ದ ಹೆಣ್ಣು ಹುಲಿಯೊಂದು ದಿಢೀರನೇ ಪಂಜರದ ಮೇಲೆ ಹಾರಿ  ಹೊರಗೆ ಬಂದು ಪ್ರವಾಸಿಗರಲ್ಲಿ ಆತಂಕ ಮೂಡಿಸಿತ್ತು. ಹುಲಿ ಹೊರಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಜನರ ದಿಕ್ಕಾಪಾಲಾಗಿ ಓಡಿ ಹೋಗಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಆಗಮಿಸಿದ ಮೃಗಾಲಯದ ಸಿಬ್ಬಂದಿ ಸುಮಾರು 90  ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಯಾರಿಗೂ ಹಾನಿಯಾಗದಂತೆ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಗು ಪಂಜರದೊಳಗೆ ಹಾಕಿದ್ದಾರೆ.

ನಿನ್ನೆ ಸಂಜೆ ಸುಮಾರು 5 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರ ಮಕ್ಕಳು ಬಲೂನು ಹಿಡಿದಿದ್ದರಿಂದ ಗೊಂದಲಕ್ಕೀಡಾದ ಹುಲಿ ಪಂಜರದಿಂದ ಹೊರಗೆ ಬಂದಿದೆ ಎಂದು ಮೃಗಾಲಯದ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಹುಲಿ ಗೊಂದಲದಿಂದ ಹೊರಗೆ ಬಂದಿದೆಯೇ ಹೊರತು ಯಾರಿಗೂ ಹಾನಿ ಮಾಡಿಲ್ಲ. ಹುಲಿ ಶಾಂತವಾಗಿದ್ದು, ಅದನ್ನು ಕೂಡಲೇ ಬಂಧಿಸಿ ಮತ್ತೆ ಪಂಜರದೊಳಗೆ ಬಿಡಲಾಗಿದೆ ಎಂದು ಅವರು  ಹೇಳಿದ್ದಾರೆ.

ಒಟ್ಟಾರೆ ಭಾನುವಾರದ ರಜೆಯನ್ನು ಮೃಗಾಲಯಕ್ಕೆ ಭೇಟಿ ನೀಡಿ ಮಜಾ ಮಾಡಲು ಬಂದಿದ್ದ ಪ್ರವಾಸಿಗರಿಗೆ ಮಾತ್ರ ಹುಲಿ ಹೊರಗೆ ಬರುತ್ತಿದ್ದಂತೆಯೇ ಜೀವ ಬಾಯಿಗೆ ಬಂದ ಅನುಭವವಾಗಿದ್ದಂತೂ ನಿಜ...

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT