ಸಂಗ್ರಹ ಚಿತ್ರ 
ದೇಶ

ಪಂಜರ ಬಿಟ್ಟು ಹೊರ ಬಂದ ಹೆಣ್ಣು ಹುಲಿ; ಕಂಗಾಲಾದ ಪ್ರವಾಸಿಗರು!

ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಇಂದೋರ್: ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಭಾನುವಾರ ರಜೆ ದಿನವಾದ್ದರಿಂದ ಇಂದೋರ್ ನಲ್ಲಿರುವ ಕಮ್ಲಾ ನೆಹರೂ ಪ್ರಾಣಿ ಸಂಗ್ರಹಾಲಯಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಪಂಜರದೊಳಿದ್ದ ಹೆಣ್ಣು ಹುಲಿಯೊಂದು ದಿಢೀರನೇ ಪಂಜರದ ಮೇಲೆ ಹಾರಿ  ಹೊರಗೆ ಬಂದು ಪ್ರವಾಸಿಗರಲ್ಲಿ ಆತಂಕ ಮೂಡಿಸಿತ್ತು. ಹುಲಿ ಹೊರಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಜನರ ದಿಕ್ಕಾಪಾಲಾಗಿ ಓಡಿ ಹೋಗಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಆಗಮಿಸಿದ ಮೃಗಾಲಯದ ಸಿಬ್ಬಂದಿ ಸುಮಾರು 90  ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಯಾರಿಗೂ ಹಾನಿಯಾಗದಂತೆ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಗು ಪಂಜರದೊಳಗೆ ಹಾಕಿದ್ದಾರೆ.

ನಿನ್ನೆ ಸಂಜೆ ಸುಮಾರು 5 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರ ಮಕ್ಕಳು ಬಲೂನು ಹಿಡಿದಿದ್ದರಿಂದ ಗೊಂದಲಕ್ಕೀಡಾದ ಹುಲಿ ಪಂಜರದಿಂದ ಹೊರಗೆ ಬಂದಿದೆ ಎಂದು ಮೃಗಾಲಯದ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಹುಲಿ ಗೊಂದಲದಿಂದ ಹೊರಗೆ ಬಂದಿದೆಯೇ ಹೊರತು ಯಾರಿಗೂ ಹಾನಿ ಮಾಡಿಲ್ಲ. ಹುಲಿ ಶಾಂತವಾಗಿದ್ದು, ಅದನ್ನು ಕೂಡಲೇ ಬಂಧಿಸಿ ಮತ್ತೆ ಪಂಜರದೊಳಗೆ ಬಿಡಲಾಗಿದೆ ಎಂದು ಅವರು  ಹೇಳಿದ್ದಾರೆ.

ಒಟ್ಟಾರೆ ಭಾನುವಾರದ ರಜೆಯನ್ನು ಮೃಗಾಲಯಕ್ಕೆ ಭೇಟಿ ನೀಡಿ ಮಜಾ ಮಾಡಲು ಬಂದಿದ್ದ ಪ್ರವಾಸಿಗರಿಗೆ ಮಾತ್ರ ಹುಲಿ ಹೊರಗೆ ಬರುತ್ತಿದ್ದಂತೆಯೇ ಜೀವ ಬಾಯಿಗೆ ಬಂದ ಅನುಭವವಾಗಿದ್ದಂತೂ ನಿಜ...

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT