ಸಾಂದರ್ಭಿಕ ಚಿತ್ರ 
ದೇಶ

ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ನಿರ್ಧಾರ: ದುಬಾರಿಯಾಗಲಿರುವ ಚಹಾ

ನಮ್ಮ ದೇಶದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ದ್ರವಾಹಾರ ಚಹಾ. ಟೀ ಬೆಳೆಯುವ...

ಕೊಚ್ಚಿ: ನಮ್ಮ ದೇಶದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ದ್ರವಾಹಾರ ಚಹಾ. ಟೀ ಬೆಳೆಯುವ ರಾಜ್ಯಗಳಲ್ಲಿ ತೋಟದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲು ಅಲ್ಲಿನ ಸರ್ಕಾರಗಳು ಸಿದ್ಧವಾಗಿರುವ ಸಂದರ್ಭದಲ್ಲಿ ಚಹಾದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಚಹಾದ ಬೆಲೆ ಹಾಲು, ಸಕ್ಕರೆಯ ಬೆಲೆಗೆ ಸಂಬಂಧ ಹೊಂದಿದ್ದರೂ ಕೂಡ ಚಹಾ ತೋಟದ ಕಾರ್ಮಿಕರ ಸಮಸ್ಯೆ ಚಹಾ ಬೆಲೆ ಹೆಚ್ಚಾಗಲು ಕಾರಣವಾಗಬಹುದು. ತಜ್ಞರ ಪ್ರಕಾರ ಚಹಾ ಬೆಲೆ ಪ್ರತಿ ಈಗಿರುವ 8ರಿಂದ 15 ರೂಪಾಯಿ ಬದಲಿಗೆ 18ರಿಂದ 20 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕಾರಣಗಳು: ಯಾವಾಗ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆಯೋ ಆಗ ಕಾರ್ಮಿಕರ ವೇತನ ಕೂಡ ಜಾಸ್ತಿಯಾಗಬೇಕು. ಬಂಡವಾಳ ಹೆಚ್ಚಳವನ್ನು ಕಂಪೆ ನಿಗಳು ಗ್ರಾಹಕರ ಮೇಲೆ ಹಾಕುತ್ತವೆ. ಅಸ್ಸಾಂನಲ್ಲಿ ಟೀ ತೋಟದಲ್ಲಿ ಕೆಲಸ ಮಾಡುವ ಕೂಲಿಕಾರರ ವೇತನ ದಿನಕ್ಕೆ 126 ರೂಪಾಯಿ. ಅದನ್ನು ದಿನಕ್ಕೆ ಕನಿಷ್ಠ ವೇತನ 250 ರೂಪಾಯಿಗೆ ನಿಗದಿಪಡಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಉತ್ಪಾದನೆ ವೆಚ್ಚ ಜಾಸ್ತಿಯಾಗುತ್ತಿದೆ.ಆಗ ಸಹಜವಾಗಿ ಚಹಾ ಪುಡಿ ಬೆಲೆ ದುಬಾರಿಯಾಗುತ್ತದೆ.
ದೇಶದ ಚಹಾ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಉತ್ಪಾದಿಸುವ ದಕ್ಷಿಣ ಭಾರತದಲ್ಲಿ ಅದೇ ಪರಿಸ್ಥಿತಿ. ತಮಿಳುನಾಡಿನಲ್ಲಿ ಚಹಾ ತೋಟದ ಕಾರ್ಮಿಕರ ವೇತನವನ್ನು ಕನಿಷ್ಠ ಮೂಲ ವೇತನ 223 ರೂಪಾಯಿ ನಿಗದಿಗೊಳಿಸಲಿದ್ದು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.
ಕಳೆದ ವರ್ಷ ಸೆಪ್ಟೆಂಬರ್ ವರೆಗೆ ಅಸ್ಸಾಂನಲ್ಲಿ ಚಹಾದ ಬೆಲೆ ಕೆಜಿಗೆ 110ರೂಪಾಯಿಯಿಂದ 148 ರೂಪಾಯಿ. ದಕ್ಷಿಣ ಭಾರತದಲ್ಲಿ 62ರಿಂದ 71 ರೂಪಾಯಿ, ಪಶ್ಚಿಮ ಬಂಗಾಲದಲ್ಲಿ 65ರಿಂದ 81 ರೂಪಾಯಿಯಿದೆ. ಈ ವರ್ಷ ಸೆಪ್ಟೆಂಬರ್ ವರೆಗೆ ಚಹಾ ಬೆಲೆ ಸೆಪ್ಟೆಂಬರ್ ನಲ್ಲಿ 117 ರೂಪಾಯಿಯಿಂದ 136 ರೂಪಾಯಿ, ದಕ್ಷಿಣ ಭಾರತದಲ್ಲಿ 84ರಿಂದ 97 ರೂಪಾಯಿ ಮತ್ತು ಪಶ್ಚಿಮ ಬಂಗಾಲದಲ್ಲಿ 99ರಿಂದ 106 ರೂಪಾಯಿಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT