ಸಂಗ್ರಹ ಚಿತ್ರ 
ದೇಶ

ಎ ದಿಲ್ ಹೈ ಮುಷ್ಕಿಲ್ ಚಿತ್ರ ವಿವಾದ: "ಸೇನೆಯನ್ನು ರಾಜಕೀಯಗೊಳಿಸಬೇಡಿ"; "ಪ್ರಾಯಶ್ಚಿತ್ತ ಹಣ" ತಿರಸ್ಕರಿಸಿದ ಸೈನಿಕರು!

ಪಾಕಿಸ್ತಾನ ನಟರನ್ನು ಹೊಂದಿರುವ ಎ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ತೀಕ್ಷ್ಣ ತಿರುಗೇಟು ನೀಡಿರುವ ಭಾರತೀಯ ಸೇನೆ ಚಿತ್ರತಂಡ ನೀಡಲಿಚ್ಛಿಸಿದ್ದ 5 ಕೋಟಿ ಹಣವನ್ನು ತಿರಸ್ಕರಿಸಿದೆ.

ನವದೆಹಲಿ: ಪಾಕಿಸ್ತಾನ ನಟರನ್ನು ಹೊಂದಿರುವ ಎ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ತೀಕ್ಷ್ಣ ತಿರುಗೇಟು  ನೀಡಿರುವ ಭಾರತೀಯ ಸೇನೆ ಚಿತ್ರತಂಡ ನೀಡಲಿಚ್ಛಿಸಿದ್ದ 5 ಕೋಟಿ ಹಣವನ್ನು ತಿರಸ್ಕರಿಸಿದೆ.

ಪಾಕಿಸ್ತಾನದ ನಟ ಫವಾದ್ ಖಾನ್ ಅಭಿನಯದ ಕರಣ್ ಜೋಹರ್ ಅವರ ಎ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬಹಿಷ್ಕಾರ ಹಾಕಿ ಚಿತ್ರ ಬಿಡುಗಡೆಗೆ ವಿರೋಧ  ವ್ಯಕ್ತಪಡಿಸಿದ ಬಳಿಕ ಉಂಟಾದ ವಿವಾದ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಎಂಎನ್ ಎಸ್ ಹಾಗೂ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡುವೆ ಮಹಾರಾಷ್ಟ್ರ ಸಿಎಂ  ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಸಂಧಾನವಾಗಿ, ಸೇನೆಗೆ 5 ಕೋಟಿ ನೀಡುವ ಒಪ್ಪಂದಕ್ಕೆ ನಿರ್ಮಾಪಕರು ಒಪ್ಪಿದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಲಾಗಿತ್ತು.

ಆದರೆ ಸೇನೆಯನ್ನು ಮುಂದಿಟ್ಟುಕೊಂಡು ಎಂಎನ್ಎಸ್ ಮಾಡುತ್ತಿರುವ ರಾಜಕೀಯದಿಂದ ಬೇಸರ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇತ್ತೀಚಿನ ಬೆಳವಣಿಗೆಗಳು ನಿಜಕ್ಕೂ ಬೇಸರತರಿಸಿದೆ.  ಭಾರತೀಯ ಸೇನೆ ಕಲ್ಯಾಣ ನಿಧಿಗೆ ಯಾರೇ ಆದರೂ ವೈಯಕ್ತಿಕವಾಗಿ ಸ್ವಇಚ್ಛೆಯಿಂದ ಮತ್ತು ಪ್ರೀತಿಯಿಂದ ಹಣ ನೀಡಬೇಕೇ ಹೊರತು ಒಬ್ಬರನ್ನು ಬೆದರಿಸಿ ಅಥವಾ ಅವರ ಮೇಲೆ ಒತ್ತಡ ಹೇರಿ  ನೀಡುವ ಹಣ ನಮಗೆ ಬೇಕಿಲ್ಲ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಇತ್ತೀಚಿನ ಕೆಲ ಬೆಳವಣಿಗೆಗಳು ನಿಜಕ್ಕೂ ನೋವು ತರಿಸಿದೆ. ರಾಜಕೀಯದ ಉದ್ದೇಶಕ್ಕೆ ಸೇನೆಯನ್ನು ಎಳೆದು ತಂದು ತಮ್ಮ ಸ್ವಹಿತಾಸಕ್ತಿ  ಸಾಧನೆ ಮಾಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇಂತಹ ಬೆಳವಣಿಗಳನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಿವೃತ್ತ ವಾಯು ಸೇನೆ ಅಧಿಕಾರಿ ಮಾರ್ಷಲ್  ಮನಮೋಹನ್ ಬಹದ್ದೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT