ಅಶುತೋಷ್ 
ದೇಶ

ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಸಮರ್ಥನೆಗೆ ನೆಹರು, ಗಾಂಧಿ, ವಾಜಪೇಯಿ ಉದಾಹರಣೆ ನೀಡಿದ ಅಶುತೋಷ್

ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ನ್ನು ಸಮರ್ಥಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್, ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಎಂದು ಹೇಳಿದ್ದಾರೆ.

ನವದೆಹಲಿ: ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ನ್ನು ಸಮರ್ಥಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್, ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಎಂದು ಹೇಳಿದ್ದಾರೆ.

ಸಂದೀಪ್ ಕುಮಾರ್ ನ್ನು ಸಮರ್ಥಿಸಿಕೊಂಡಿರುವ ಅಶುತೋಷ್, ಸೆಕ್ಸ್ ಜೀವನದ ಭಾಗ ಎಂದು ಹೇಳಿದ್ದಾರೆ. ಈ ಬಗ್ಗೆ ಬ್ಲಾಗ್ ಬರೆದಿರುವ ಅಶುತೋಷ್, ಭಾರತೀಯ ಇತಿಹಾಸದಲ್ಲಿ ನಮ್ಮ ನಾಯಕರು, ಹೀರೋಗಳು ಸಾಮಾಜಿಕ ಚೌಕಟ್ಟನ್ನು ಮೀರಿ ಅವರಿಗೆ ಇಷ್ಟವಿದ್ದವರೊಂದಿಗೆ ಇದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದ್ದಾರೆ.

ಜವಾಹರ್ ಲಾಲ್ ನೆಹರು ಅವರನ್ನು ಉದಾಹರಣೆಯಾಗಿ ನೀಡಿರುವ ಅಶುತೋಷ್, ನೆಹರು ಹಾಗು ಎಡ್ವಿನಾ ಮೌಂಟ್ ಬ್ಯಾಟನ್ ಅವರ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತಿತ್ತು. ಅವರಿಬ್ಬರ ನಡುವಿನ ಪ್ರೀತಿ ನೆಹರು ಕೊನೆಯುಸಿರೆಳೆಯುವವರೆಗೂ ಇತ್ತು ಎಂದು ಹೇಳಿದ್ದಾರೆ.

ಇನ್ನು ಮಹಾತ್ಮಾ ಗಾಂಧಿ ಹಾಗು ರವೀಂದ್ರನಾಥ್ ಠಾಗೂರರ ದೂರದ ಸಂಬಂಧಿ ಸರಳಾ ಚೌಧರಿ ಅವರ ಸಂಬಂಧದ ಬಗ್ಗೆಯೂ ಮಾತನಾಡಿರುವ ಅಶುತೋಷ್, ಗಾಂಧಿ ಸರಳಾ ಅವರನ್ನು ತಮ್ಮ ಆಧ್ಯಾತ್ಮಿಕ ಪತ್ನಿ ಎಂದೇ ಗುರುತಿಸುತ್ತಿದ್ದರು. ಇದರಿಂದಾಗಿ ಕಸ್ತೂರ್ಬಾ ಗಾಂಧಿ ಅವರು ಚಿಂತಿತರಾಗಿದ್ದರು, ಅಂತಿಮವಾಗಿ ಸಿ ರಾಜಗೋಪಾಲಾಚಾರಿ ಹಾಗು ಕಾಂಗ್ರೆಸ್ ನ ಹಿರಿಯ ಮುಖಂಡರು ಮಧ್ಯ ಪ್ರವೇಶಿಸಿ ಸರಳಾ ಅವರಿಂದ ದೂರ ಉಳಿಯುವಂತೆ ಗಾಂಧಿ ಅವರನ್ನು ಒತ್ತಾಯಿಸಿದ್ದರು ಎಂದು ಅಶುತೋಷ್ ಹೇಳಿದ್ದಾರೆ.

ಇನ್ನು ಸಮಾಜವಾದಿ ನಾಯಕರಾಗಿದ್ದ ರಾಮ್ ಮನೋಹರ್ ಲೋಹಿಯಾ ಅವರು ಸಹ ವಿವಾಹವಾಗದೆ ತಮ್ಮ ಸಂಗಾತಿಯೊಂದಿಗೆ ಜೀವಿಸಿದ್ದರು. ಅವರ ಸಹೋದ್ಯೋಗಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಲೀಲಾ ಕಬೀರ್ ಅವರನ್ನು ವಿವಾಹವಾಗಿದ್ದರೂ ಜಯಾ ಜತೇಲಿ ಅವರೊಂದಿಗಿನ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ, ಅವರಂತೆಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹವಾಗದೆ ಇದ್ದರು ತಾವು ಬ್ರಹ್ಮಚಾರಿಯಲ್ಲ ಎಂದು ಸಂಸತ್ ನಲ್ಲಿಯೇ ಹೇಳಿದ್ದರು. ಅವರು ತಮ್ಮ ಸ್ನೇಹಿತೆಯೊಂದಿಗೆ ಜೀವಿಸಿದ್ದರು ಸಮಾಜ ಅದನ್ನು ಆಕ್ಷೇಪಿಸಲಿಲ್ಲ. ಆದ್ದರಿಂದ ಸೆಕ್ಸ್ ಜೀವನದ ಭಾಗವಾಗಿದೆ, ಸಂದೀಪ್ ಕುಮಾರ್ ಅವರ ಘಟನೆಯಲ್ಲಿ ಸಮ್ಮತಿಯಿಂದಲೇ ಸೆಕ್ಸ್ ನಡೆದಿದೆ ಎಂದು ಹೇಳುವ ಮೂಲಕ ಅಶುತೋಷ್ ಆಪ್ ನ ಮಾಜಿ ಸಚಿವನನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT