ಕಾಲ್ ಡ್ರಾಪ್ ಸಮಸ್ಯೆ 
ದೇಶ

ಕಟ್ಟಡಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ: ಸರ್ಕಾರ

ಕಾಲ್ ಡ್ರಾಪ್ ಸಮಸ್ಯೆ ಕುರಿತು ಸಮೀಕ್ಷೆಯ ವರದಿಯೊಂದನ್ನು ಕೇಂದ್ರ ಸರ್ಕರ ಬಹಿರಂಗಪಡಿಸಿದ್ದು, ಕಟ್ಟಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ.

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ಕುರಿತು ಸಮೀಕ್ಷೆಯ ವರದಿಯೊಂದನ್ನು ಕೇಂದ್ರ ಸರ್ಕರ ಬಹಿರಂಗಪಡಿಸಿದ್ದು, ಕಟ್ಟಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ. 
2016 ರ ಡಿಸೆಂಬರ್ ನಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ ಹಾಗು ಗೋವಾಗಳಲ್ಲಿ ಟೆಲಿಕಾಂ ಇಲಾಖೆ (ಡಿಒಟಿ) ಐವಿಆರ್ ಎಸ್ ವ್ಯವಸ್ಥೆಯನ್ನು ಪ್ರಾರಂಭಿಸಿ ಕಾಲ್ ಡ್ರಾಪ್ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುವ ಕೆಲಸ ಪ್ರಾರಂಭಿಸಿತ್ತು. 
2016 ರ ಡಿಸೆಂಬರ್ ನಿಂದ 2017 ರ ಫೆಬ್ರವರಿ 28 ವರೆಗೆ ದೇಶಾದ್ಯಂತ ಎಲ್ಲಾ ಆಪರೇಟರ್ ಗಳ ಗ್ರಾಹಕರಿಗೆ ಸುಮಾರು 16,61,640 ಯಶಸ್ವಿ ಔಟ್ ಬೌಂಡ್ ಕರೆಗಾನ್ನು ಮಾಡಲಾಗಿದೆ. ಸುಮಾರು 2,20,935 ಗ್ರಾಹಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದು  1,38,072 (ಶೇ.62.5) ರಷ್ಟು ಗ್ರಾಹಕರು ಕಾಲ್ ಡ್ರಾಪ್ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಗ್ರಾಹಕರಿಂದ ಪಡೆಯಲಾದ ಪ್ರತಿಕ್ರಿಯೆಯಲ್ಲಿ ಕಟ್ಟಡಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತಿದೆ ಎಂಬ ಅಂಶ ಬಹಿರಂಗವಾಗಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. 
ಈ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಐವಿಆರ್ ಎಸ್ ಕರೆ ಸ್ವೀಕರಿಸುತ್ತಾರೆ ಹಾಗೂ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಷ್ಟೇ ಅಲ್ಲದೇ 1955 ಟೋಲ್ ಫ್ರೀ ನಂಬರ್ ಗೆ ಗ್ರಾಹಕರು ತಾವು ವಾಸಿಸುವ ನಗರ, ಗ್ರಾಮದ ಹೆಸರನ್ನು ನಮೂದಿಸಿ ಎಸ್ಎಂಎಸ್ ಕಳಿಸಿ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಗ್ರಾಹಕರಿಂದ ದೂರನ್ನು ಸಂಬಂಧಪಟ್ಟ ಟೆಲಿಕಾಂ ಸೇವೆಯನ್ನು ನೀಡುವ ಸಂಸ್ಥೆಗಳ ಗಮನಕ್ಕೆ ತಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಟೆಲಿಕಾಂ ಇಲಾಖೆಯ ಪ್ರಕಟಣೆ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT