ಕಾಲ್ ಡ್ರಾಪ್ ಸಮಸ್ಯೆ 
ದೇಶ

ಕಟ್ಟಡಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ: ಸರ್ಕಾರ

ಕಾಲ್ ಡ್ರಾಪ್ ಸಮಸ್ಯೆ ಕುರಿತು ಸಮೀಕ್ಷೆಯ ವರದಿಯೊಂದನ್ನು ಕೇಂದ್ರ ಸರ್ಕರ ಬಹಿರಂಗಪಡಿಸಿದ್ದು, ಕಟ್ಟಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ.

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ಕುರಿತು ಸಮೀಕ್ಷೆಯ ವರದಿಯೊಂದನ್ನು ಕೇಂದ್ರ ಸರ್ಕರ ಬಹಿರಂಗಪಡಿಸಿದ್ದು, ಕಟ್ಟಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದೆ. 
2016 ರ ಡಿಸೆಂಬರ್ ನಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ ಹಾಗು ಗೋವಾಗಳಲ್ಲಿ ಟೆಲಿಕಾಂ ಇಲಾಖೆ (ಡಿಒಟಿ) ಐವಿಆರ್ ಎಸ್ ವ್ಯವಸ್ಥೆಯನ್ನು ಪ್ರಾರಂಭಿಸಿ ಕಾಲ್ ಡ್ರಾಪ್ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುವ ಕೆಲಸ ಪ್ರಾರಂಭಿಸಿತ್ತು. 
2016 ರ ಡಿಸೆಂಬರ್ ನಿಂದ 2017 ರ ಫೆಬ್ರವರಿ 28 ವರೆಗೆ ದೇಶಾದ್ಯಂತ ಎಲ್ಲಾ ಆಪರೇಟರ್ ಗಳ ಗ್ರಾಹಕರಿಗೆ ಸುಮಾರು 16,61,640 ಯಶಸ್ವಿ ಔಟ್ ಬೌಂಡ್ ಕರೆಗಾನ್ನು ಮಾಡಲಾಗಿದೆ. ಸುಮಾರು 2,20,935 ಗ್ರಾಹಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದು  1,38,072 (ಶೇ.62.5) ರಷ್ಟು ಗ್ರಾಹಕರು ಕಾಲ್ ಡ್ರಾಪ್ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಗ್ರಾಹಕರಿಂದ ಪಡೆಯಲಾದ ಪ್ರತಿಕ್ರಿಯೆಯಲ್ಲಿ ಕಟ್ಟಡಗಳ ಒಳಗೇ ಹೆಚ್ಚು ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತಿದೆ ಎಂಬ ಅಂಶ ಬಹಿರಂಗವಾಗಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. 
ಈ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಐವಿಆರ್ ಎಸ್ ಕರೆ ಸ್ವೀಕರಿಸುತ್ತಾರೆ ಹಾಗೂ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಷ್ಟೇ ಅಲ್ಲದೇ 1955 ಟೋಲ್ ಫ್ರೀ ನಂಬರ್ ಗೆ ಗ್ರಾಹಕರು ತಾವು ವಾಸಿಸುವ ನಗರ, ಗ್ರಾಮದ ಹೆಸರನ್ನು ನಮೂದಿಸಿ ಎಸ್ಎಂಎಸ್ ಕಳಿಸಿ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಗ್ರಾಹಕರಿಂದ ದೂರನ್ನು ಸಂಬಂಧಪಟ್ಟ ಟೆಲಿಕಾಂ ಸೇವೆಯನ್ನು ನೀಡುವ ಸಂಸ್ಥೆಗಳ ಗಮನಕ್ಕೆ ತಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಟೆಲಿಕಾಂ ಇಲಾಖೆಯ ಪ್ರಕಟಣೆ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT