ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (ಪಿಎಂಜಿಕೆವೈ)ಡಿ ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವ ಅವಕಾಶ ಮಾ.31ಕ್ಕೆ ಮುಕ್ತಾಯಗೊಂಡಿದ್ದು, ತೆರಿಗೆ ಇಲಾಖೆ 15 ದಿನಗಳಲ್ಲಿ 540 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಮಾದಿದೆ.
ಏ.1 ರಿಂದ ದೇಶಾದ್ಯಂತ ತೆರಿಗೆ ಕಳ್ಳತನವನ್ನು ಬಯಲಿಗೆಳೆಯಲು ನಡೆದ ದಾಳಿಯಲ್ಲಿ ಒಟ್ಟು 540 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಕೇವಲ ನಾಮ್ ಕೇ ವಾಸ್ತೆ ನಡೆಯುತ್ತಿದ್ದ ಕಂಪನಿಗಳ ಮೇಲೆ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ದಾಳಿ ನಡೆಸಲಾಗಿದೆ.
ಏ.15 ರವರೆಗೆ ಸಂಗ್ರಹವಾಗಿರುವ ಮಾಹಿತಿಯ ಪ್ರಕಾರ ಐಟಿ ಇಲಾಖೆ 250 ಶೋಧಕಾರ್ಯಾಚರಣೆ ಹಾಗೂ ಸಮೀಕ್ಷೆ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ನಾಮ್ ಕೇ ವಾಸ್ತೆ ನಡೆಯುತ್ತಿದ್ದ ಕನಿಷ್ಠ 300 ಸಂಸ್ಥೆಗಳನ್ನು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವುದಕ್ಕಾಗಿ ಜಾರಿಗೊಳಿಸಲಾಗಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಕ್ತಾಯಗೊಂಡ ಬೆನ್ನಲ್ಲೇ ಬೃಹತ್ ಪ್ರಮಾಣದ ಮೊತ್ತ ಬಹಿರಂಗವಾಗಿರುವುದು ಮಹತ್ವ ಪಡೆದುಕೊಂಡಿದೆ. ಐಟಿ ಇಲಾಖೆಯ ದಾಳಿ ಹೀಗೆಯೇ ಮುಂದುವರೆಯಲಿದ್ದು, ಮತ್ತಷ್ಟು ಕಪ್ಪುಹಣ ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.