ನವದೆಹಲಿ: ಕಾರಿನ ಮೇಲೆ ದಾಳಿಗೆ ಬಿಜೆಪಿ ಹಾಗೂ ಆರ್'ಎಸ್ಎಸ್'ನವರೇ ಕಾರಣ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷ ಭಾನುವಾರ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಪ್ರಭಾತ್ ಝಾ ಅವರು, ಸಾಕ್ಷ್ಯಾಧಾರಗಳಿಲ್ಲೆಯೇ ಒಬ್ಬರ ಮೇಲೆ ಆರೋಪ ಮಾಡುವುದು, ದೂಷಣೆ ಮಾಡುವುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಯಾವುದನ್ನೂ ಅರ್ಥ ಮಾಡಿಕೊಳ್ಳದೆಯೇ ಆರೋಪವನ್ನು ಮಾಡುವುದಕ್ಕೂ ಮುನ್ನ ರಾಹುಲ್ ಮೊದಲು ಸಂಘ ಪರಿವಾರದವರನ್ನು ಆರ್ಥಮಾಡಿಕೊಳ್ಳಲು ಪ್ರಯತ್ನ ಪಡಬೇಕು. ಕಾಂಗ್ರೆಸ್ ನವರ ಈ ರೀತಿಯ ಹೇಳಿಕೆಗಳು ಅವರಲ್ಲಿರುವ ಹತಾಶೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.