ಸಂಗ್ರಹ ಚಿತ್ರ 
ದೇಶ

ಭಾರತ ಪ್ರವೇಶಿಸಿದ ಅಲ್ ಖೈದಾ: ಎನ್ ಕೌಂಟರ್ ನಲ್ಲಿ ಹತ್ಯೆಯಾದ ದುಜಾನಾ, ಆರೀಫ್ ಲಷ್ಕರ್ ಉಗ್ರರಲ್ಲ

ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ತಾಣವಾಗುತ್ತಿರುವ ಕಾಶ್ಮೀರಕ್ಕೆ ಇದೀಗ ಅಂತರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದ್ ಪ್ರವೇಶ ಮಾಡಿದೆ ಎಂದು ಹೇಳಲಾಗುತ್ತಿದೆ...

ನವದೆಹಲಿ; ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ತಾಣವಾಗುತ್ತಿರುವ ಕಾಶ್ಮೀರಕ್ಕೆ ಇದೀಗ ಅಂತರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದ್ ಪ್ರವೇಶ ಮಾಡಿದೆ ಎಂದು ಹೇಳಲಾಗುತ್ತಿದೆ. 
ಆಗಸ್ಟ್ 1 ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಅಬು ದುಜಾನಾ ಹಾಗೂ ಆರೀಫಾ ಲೆಲ್ಹಾರಿ ಎಂಬ ಉಗ್ರರು ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಗಳು ಅಲ್ಲ. ಅವರಿಬ್ಬರೂ ಅಲ್ ಖೈದಾ ಸಂಘಟನೆಯವರು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ದೇಶದಲ್ಲಿ ಅಲ್ ಖೈದಾ ಉಗ್ರರ ಮೊದಲ ಬಲಿ ಆದಂತಾಗಿದೆ ಎಂಬ ಸುದ್ದಿ ಇದೀಗ ಕಾಶ್ಮೀರದಲ್ಲಿ ಹರಿದಾಡತೊಡಗಿದೆ. 
ಇದಕ್ಕೆ ಪುಷ್ಟಿ ನೀಡುವಂತೆ ಸಾಯುವ ಮುನ್ನ ಬಂಧುಗಳಿಗೆ ದೂರವಾಣಿ ಕರೆ ಮಾಡಿದ್ದ ದುಜಾನಾ, ತಾನೂ ಹಾಗೂ ಆರೀಫ್ ಅಲ್ ಖೈದಾ ಸಂಘಟನೆಯವರಾಗಿದ್ದು, ಸಾವನ್ನಪ್ಪಿದ ಬಳಿಕ ನಮ್ಮ ಶವದ ಮೇಲೆ ಪಾಕಿಸ್ತಾನದ ಬಲಗಿದೆ ಅಲ್ ಖೈದಾ ಧ್ವಜ ಹೊದಿಸುವಂತೆ ಹೇಳಿಕೊಂಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅಲ್ಲದೆ, ಅಲ್ ಖೈದಾ ಕಾಶ್ಮೀರ ಘಟಕ ಅನ್ರ್ ಘಜ್ವಾತ್ ಉಲ್ ಹಿಂದ್ ಸಂಘಟನೆಯ ಮುಖ್ಯಸ್ಥ ಝಾಕೀರ್ ಮುಸಾ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಹತ ಉಗ್ರರಿಬ್ಬರೂ ಅಲ್ ಖೈದಾದವರು ಎಂದು ಹೇಳಿಕೊಂಡಿದ್ದಾನೆ. 
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ತೊರೆದು ಅಲ್ ಖೈದಾ ಸೇರಿರುವ ಮುಸಾನ ಧ್ವನಿ, ಆತ ಹಿಂದೆ ಬಿಡುಗಡೆ ಮಾಡಿದ್ದ ಆಡಿಯೋ ಕ್ಲಿಪ್ ಗಳ ಜತೆ ಹೊಂದಾಣಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇನ್ನು ನಾವು ಖಚಿತಪಡಿಸಲಾಗದು ಎಂದು ಡಿಜಿಪಿ ಎಸ್.ಪಿ.ವೈದ್ ಅವರು ತಿಳಿಸಿದ್ದಾರೆ. 
2003ರಿಂದಲೂ ಅಲ್ ಖೈದಾ ಕಾಶ್ಮೀರದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಹಿಂದೆ ಇರುವ ತಂತ್ರಗಳೇನು ಎಂಬುದನ್ನು ನೋಡಬೇಕಿದೆ. ಆದರೆ ಏನೇಯಿದ್ದರೂ ನಮ್ಮ ಪ್ರಕಾರ ಉಗ್ರರು ಉಗ್ರರೇ...ಅವರು ಯಾವುದೇ ಸಂಘಟನೆಗೆ ಸೇರಿದ್ದರೂ ಅವರು ಉಗ್ರರೇ ಆಗಿರುತ್ತಾರೆಂದು ವೈದ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT