ಕೊಚ್ಚಿನ್: ಕೇರಳ ಹೈಕೋರ್ಟ್ ಸೋಮವಾರ ಮಲೆಯಾಳಂ ನಟ ದೀಲೀಪ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ವರ್ಷದ ಆರಂಭದಲ್ಲಿ ನಟಿಯೊಬ್ಬರನ್ನು ಮತ್ತು ಅಪಹರಣ ನಡೆಸಿದ ಆರೋಪದ ಮೇಲೆ ನತ ದಿಲೀಪ್ ರನ್ನು ಬಂಧಿಸಲಾಗಿತ್ತು.
ನಟಿ ಅಪಹರಣ ಪ್ರಕರಣದಲ್ಲಿ 11 ನೇ ಆರೋಪಿಯಾಗಿದ್ದ ದಿಲೀಪ್ ಕಳೆದ ವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಪ್ರಕರಣವು ಒಂದು ಚಿತ್ರದ ಕಥಾವಸ್ತುವಿಗಿಂತ ಹೆಚ್ಚು ನಾಟಕೀಯವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ ನಟ ದಿಲೀಪ್ ಪ್ರಕಾರ ತನ್ನನ್ನು ಸಕ್ರಿಯ ಚಿತ್ರರಂಗದ ಬದುಕಿನಿಂದ ದೂರ ಉಳಿಸಲು ಚಿತ್ರ ಜಗತ್ತಿನ ಕೆಲವು ಪ್ರಭಾವಿಗಳು ಅವರ ವಿರುದ್ದ ಪಿತೂರಿ ನಡೆಸಿೀ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ಪಲ್ಸರ್ ಸುನಿ ಬಗ್ಗೆ ಪ್ರಶ್ನಿಸಿದಾಗ, ದಿಲೀಪ್ ತಾನೆಂದೂ ಅವನನ್ನು ಭೇಟಿಯಾಗಿಲ್ಲ, ಮಾತನಾಡಿಲ್ಲ ಎಂದು ಪುನರುಚ್ಚರಿಸಿದರು.
ಮಲಯಾಳಂ ಚಿತ್ರೊದ್ಯಮದ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಸೇರಿ ಹಲವರು ನಟ ದಿಲೀಪ್ ವಿರುದ್ದ ಈ ಸುಳ್ಳು ಪ್ರಕರಣ ಸೃಷ್ಟಿಸಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮಲಯಾಳಂ ನಟಿ ಫೆಬ್ರವರಿ 17 ರಂದು ಪುರುಷರ ಗುಂಪಿನಿಂದ ಅಪಹರಣಕ್ಕೆ ಒಳಗಾಗಿದ್ದರು, ಸುನೀಲ್ ಕುಮಾರ್ ಅಲಿಯಾಸ್ 'ಪಲ್ಸರ್' ಸುನಿ ಎಂಬ ಹೆಸರಿನ ವ್ಯಕ್ತಿ ಈ ಅಪಹರಣದ ನೇತೃತ್ವ ವಹಿಸಿದ್ದರು.
ಪೊಲೀಸರು ಸಂಗ್ರಹಿಸಿದ ಪುರಾವೆಯ ಪ್ರಕಾರ, ಪಲ್ಸರ್ ಸುನಿ ಅನ್ನು ಪ್ರಮುಖ ನಟ ದಲೀಪ್ ಈ ಕೆಲಸಕ್ಕೆ ನೇಮಿಸಿಕೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos