ಆರ್ ಶೇಷ ಸಾಯಿ 
ದೇಶ

ನಾರಾಯಣಾ ಮೂರ್ತಿ ವಿರುದ್ಧ ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಶೇಷಸಾಯಿ ಅಸಮಾಧಾನ

ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ.

ಬೆಂಗಳೂರು: ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ. 
ಷೇರುದಾರರಿಗೆ ತಾವು ತಪ್ಪು ಮಾಹಿತಿ ನೀಡಿರುವಂತೆ ಬಿಂಬಿಸುವ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಶೇಷ ಸಾಯಿ ಹೇಳಿದ್ದಾರೆ. ಇನ್ಫೋಸಿಸ್ ಮಂಡಳಿಗೆ ರಾಜೀನಾಮೆ ನೀಡಿದ ಬಳಿಕ, ಪ್ರಚೋದನೆಗಳ ಹೊರತಾಗಿಯೂ ನಾನು ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಉಳಿದಿದ್ದೆ. ಆದರೆ ನಾರಾಯಣ ಮೂರ್ತಿ ಅವರು ಹೂಡಿಕೆದಾರರಿಗೆ ಹೇಳಿಕೆ ನೀಡಿರುವುದು ನನ್ನನ್ನು ಸಾರ್ವಜನಿಕ ಹೇಳಿಕೆ ನೀಡುವಂತೆ ಮಾಡಿದೆ ಎಂದು ಶೇಷ ಸಾಯಿ ಹೇಳಿದ್ದಾರೆ. 
ಸಿಇಒ ಸಿಕ್ಕಾ ರಾಜೀನಾಮೆ ಬಳಿಕ ಶೇಷಸಾಯಿ ಅವರು ಆ.24 ರಂದು ಇನ್ಫೋಸಿಸ್ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಳಿಕ ನಂದನ್ ನಿಲೇಕಣಿ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾಳಿಗಳು ಮತ್ತೆ ಆರಂಭವಾದರೇ ಅಮೆರಿಕದ ವಿರುದ್ಧ 'ಹೊಸ ಆಕ್ರಮಣಕಾರಿ ವಿಧಾನ ಬಳಸುತ್ತೇವೆ': ಇರಾನ್ ಸೇನೆ ಎಚ್ಚರಿಕೆ

TVK ಸರ್ಕಾರಕ್ಕೆ ಸಂಕಷ್ಟ; ವಿಜಯ್ ಸಂಪುಟಕ್ಕೆ AIADMK ಸೇರಿದರೆ CPM ಬೆಂಬಲ ಮರುಪರಿಶೀಲನೆ: ಷಣ್ಮುಗಂ ಶಾಕಿಂಗ್ ಹೇಳಿಕೆ

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!

ವಚನಾನಂದಶ್ರೀ ವಿರುದ್ಧದ Pocso ಪ್ರಕರಣ: ತನಿಖಾಧಿಕಾರಿ PSI ಮಂಜುಳಾ ದಿಢೀರ್ ವರ್ಗಾವಣೆ!

SCROLL FOR NEXT