ದೇಶ

ಹಿರಿಯ ವಕೀಲ ರಾಜೀವ್ ಧವನ್ ರಾಜೀನಾಮೆ

Raghavendra Adiga
ನವದೆಹಲಿ: ಹಿರಿಯ ವಕೀಲ ರಾಜೀವ್ ಧವನ್, ತಾವು ಇನ್ನು ಮುಂದೆ ವಕೀಲ ವೃತ್ತಿಯಲ್ಲಿ ಮುಂದುವರಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಮುಖೇನ ತಿಳಿಸಿದ್ದಾರೆ. ದೆಹಲಿ ಸರ್ಕಾರದ ಪ್ರಕರಣದಲ್ಲಿ ಆದ ಅಪಮಾನಕರ ಹಿನ್ನೆಡೆಯ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಮುಖ್ಯ ನ್ಯಾಯಾಧೀಶ ಮಿಶ್ರಾ ಕಳೆದ ವಾರ ದೆಹಲಿ ಸರ್ಕಾರದ ಮನವಿ ಮತ್ತು ಅಯೋಧ್ಯೆಯ ವಿಷಯದಲ್ಲಿ ವಿಚಾರಣೆ ನಡೆಸಿದಾಗ ಕೆಲವು ಹಿರಿಯ ವಕೀಲರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಖ್ಯ ನ್ಯಾಯಾಧೀಶರ ಕಛೇರಿಗೆ ತಲುಪಿದ ವಿತರಿಸಲಾದ ಸಂಕ್ಷಿಪ್ತ ಪತ್ರದಲ್ಲಿ,"ದೆಹಲಿ ಪ್ರಕರಣದಲ್ಲಿ ಉಂಟಾದ ಅಪಮಾನಕರಆಂತ್ಯದ ಬಳಿಕ ನಾನು ನ್ಯಾಯಾಲಯದ ಪ್ರಾಕ್ಟೀಸ್ ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ." ಎಂದು ಧವನ್ ಹೇಳಿದ್ದಾರೆ.
SCROLL FOR NEXT