ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ 
ದೇಶ

ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ

ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ.

ನವದೆಹಲಿ: ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ. ಅಮರನಾಥ ಗುಹಾ ದೇವಾಲಯ ಆಡಳಿತ ಮಂಡಳಿಗೆ  ಈ ಕುರಿತಂತೆ ಪೀಠವು ಆದೇಶ ನೀಡಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಹೀಗೆ ಆಡಳಿತ ತನ್ನ ವಶಕ್ಕೆ ಬಂದ ಬಳಿಕ ಪೀಠ ಈ ಆದೇಶ ಹೊರಡಿಸಿದೆ.
ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ನೇತೃತ್ವದ ಎನ್ ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಈ ದೇವಾಲಯ ಪ್ರವೇಶಿಸಲು ಭಕ್ತರು ತಮ್ಮ  ಮೊಬೈಲ್ ಮತ್ತು ಇತರೆ ಲಗೇಜ್ ಗಳನ್ನು ಕೊನೆಯ ಚೆಕ್ ಪೋಸ್ಟ್ ನಲ್ಲಿ ಇರಿಸಬೇಕಾಗಿತ್ತು
ದೇವಾಲಯದ ಆವರಣದಲ್ಲಿ ಯಾವ ಮಂತ್ರೋದ್ಘಾರವಾಗಲಿ, ಜೈಕಾರಗಳಾಗಲೀ ಕೇಳಿ ಬರಬಾರದೆಂದು ಹಸಿರು ಪೀಠವು ಹೇಳಿದ್ದು ದೇವಾಲಯದ ಆಡಳಿತ ವಹಿಸಿಕೊಂಡವರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದಿದೆ. ಅಲ್ಲದೆ ಕಡೆಯ ಚೆಕ್ ಪೋಸ್ಟ್ ನಿಂದ ನಂತರ ಜನರು ಒಂದೇ ಸಾಲಿನಲ್ಲಿ ಚಲಿಸಿ ದೇವಾಲಯವನ್ನು ಪ್ರವೇಶಿಸಬೇಕೆಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT