ಸಾಂದರ್ಭಿಕ ಚಿತ್ರ 
ದೇಶ

ಹಗಲು ಹೊತ್ತು ಕಾಂಡೊಮ್ ಜಾಹಿರಾತು ಪ್ರಸಾರ ಮಾಡುವುದಿಲ್ಲವೇಕೆ?: ರಾಜಸ್ತಾನ ಹೈಕೋರ್ಟ್ ಪ್ರಶ್ನೆ

ದಿನವಿಡೀ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡದೆ ಕೇವಲ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ...

ಜೈಪುರ: ದಿನವಿಡೀ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡದೆ ಕೇವಲ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ಮಧ್ಯೆ ಪ್ರಸಾರ ಮಾಡುವುದು ಏಕೆಂದು ಪ್ರಶ್ನಿಸಿ ರಾಜಸ್ತಾನ ಹೈಕೋರ್ಟ್ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ರಾತ್ರಿ 10 ಗಂಟೆಯ ಮೊದಲು ಮತ್ತು ಬೆಳಗ್ಗೆ 6 ಗಂಟೆಯ ನಂತರ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ ಹೇರಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಕಳೆದ 11ರಂದು ಸಲಹೆಯನ್ನು ಹೊರಡಿಸಿತ್ತು. ಮಕ್ಕಳು ಅಸಭ್ಯ ಮತ್ತು ಸೂಕ್ತವಲ್ಲದ ವಿಷಯವನ್ನು ಟಿವಿಯಲ್ಲಿ ನೋಡಬಾರದೆಂದು ತಡೆಯಲು ಈ ಆದೇಶವೆಂದು ಮಾಹಿತಿ ಸಚಿವಾಲಯ ತಿಳಿಸಿತ್ತು.
ಈ ಆದೇಶವನ್ನು ಸರ್ಕಾರೇತರ ಸಂಘಟನೆ ಗ್ಲೋಬಲ್ ಅಲಯನ್ಸ್ ಫಾರ್ ಹ್ಯೂಮನ್ ರೈಟ್ಸ್ ರಾಜಸ್ತಾನ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಸಂಘಟನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರದೀಪ್ ನಂದ್ರಜೊಗ್ ಮತ್ತು ಡಿ.ಸಿ.ಸೊಮಾನಿ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ, ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿದೆ.
ಹಗಲು ಹೊತ್ತಿನಲ್ಲಿ ಕಾಂಡೊಮ್ ಜಾಹಿರಾತುಗಳನ್ನು ಏಕೆ ಪ್ರಸಾರ ಮಾಡಬಾರದೆಂದು ಇನ್ನು 8 ವಾರಗಳೊಳಗೆ ಉತ್ತರಿಸುವಂತೆ ಸೂಕ್ತ ಕಾರಣ ನೀಡಲು ಸಂಬಂಧಪಟ್ಟ ಇಲಾಖೆಗೆ ನ್ಯಾಯಾಲಯ ಆದೇಶ ನೀಡಿದೆ.
ಅರ್ಜಿದಾರರು ಅರ್ಜಿಯಲ್ಲಿ, ದೇಶದ ಜನಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ಅಗತ್ಯವಿದೆ. ಹಗಲು ಹೊತ್ತಿನಲ್ಲಿ ಪ್ರಸಾರ ಮಾಡದೆ ಕೇವಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ಜಾಹಿರಾತು ಪ್ರಸಾರವಾದರೆ ಅದು ನಿರ್ದಿಷ್ಟ ಜನರನ್ನು ತಲುಪುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಏಡ್ಸ್ ಕೇಸುಗಳು ಕೂಡ ಹೆಚ್ಚಾಗುತ್ತಿದ್ದು ಕಾಂಡೊಮ್ ಜಾಹಿರಾತುಗಳು ದಿನವಿಡೀ ಪ್ರಸಾರವಾದರೆ ಜನರಿಗೆ ಅರಿವು ಮೂಡಿ ರೋಗವನ್ನು ತಡೆಗಟ್ಟಬಹುದು ಅರ್ಜಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT