ಪದ್ಮಾವತಿ 
ದೇಶ

ಪದ್ಮಾವತಿಗೆ ವಿವಾದ: ಸಿಬಿಎಫ್'ಸಿ ಸಮಿತಿಯೊಂದಿಗೆ ಕೈಜೋಡಿಸಲು ರಾಜಮನೆತನಕ್ಕೆ ಆಹ್ವಾನ

ವಿವಾದಿತ ಪದ್ಮಾವತಿ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ನೆರವಾಗಲು ರಚನೆ ಮಾಡಲಾಗಿರುವ ಸಮಿತಿಯೊಂದಿಗೆ ಕೈಜೋಡಿಸುವಂತೆ ಸಿಬಿಎಫ್'ಸಿ ನನಗೆ ಆಹ್ವಾನ ನೀಡಿದೆ ಎಂದು ಮೇವಾಡ್ ರಾಜಮನೆತನಕ್ಕೆ ಸೇರಿದ ವಿಶ್ವರಾಜ್ ಸಿಂಗ್ ಅವರು...

ಜೈಪುರ: ವಿವಾದಿತ ಪದ್ಮಾವತಿ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ನೆರವಾಗಲು ರಚನೆ ಮಾಡಲಾಗಿರುವ ಸಮಿತಿಯೊಂದಿಗೆ ಕೈಜೋಡಿಸುವಂತೆ ಸಿಬಿಎಫ್'ಸಿ ನನಗೆ ಆಹ್ವಾನ ನೀಡಿದೆ ಎಂದು ಮೇವಾಡ್ ರಾಜಮನೆತನಕ್ಕೆ ಸೇರಿದ ವಿಶ್ವರಾಜ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಸಿಬಿಎಫ್'ಸಿ ಮುಖ್ಯಸ್ಥರಾಗಿರುವ ಪ್ರಸೂನ್ ಜೋಷಿಯವರು ಕರೆ ಮಾಡಿ ಸಮಿತಿಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. 
ಮನವಿ ಹಿನ್ನಲೆಯಲ್ಲಿ ಸಿಬಿಎಫ್'ಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಚಿತ್ರ ಕುರಿತಂತೆ 7 ಪ್ರಮುಖ ಅಂಶಗಳನ್ನು ತಿಳಿಸುವಂತೆ ತಿಳಿಸಿದ್ದೇನೆ. ಸಮಿತಿ ಹೇಗೆ ಕೆಲಸ ಮಾಡುತ್ತದೆ? ಅದರ ಸ್ವರೂಪವೇನು? ಸಮಿತಿಯ ಶಿಫಾರಸುಗಳು ಕೇಲವ ಸಲಹೆಯೋ ಅಥವಾ ನಿರ್ದೇಶನಗಳಾಗಿರುತ್ತವೆಯೇ? ಎಂಬ ವಿಚಾರಗಳ ವಿವರಣೆ ಕೇಳಿದ್ದೇನೆ. ಈ ಬಗ್ಗೆ ಸಿಬಿಎಫ್'ಸಿ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ನನ್ನ ಕುಟುಂಬದ ಗೌರವಾನ್ವಿತ ಪೂರ್ವಜರ ಹೆಸರು ಹಾಗೂ ಇತಿಹಾಸವನ್ನು ಚಿತ್ರದಲ್ಲಿ ಬಳಕೆ ಮಾಡಲಾಗಿದೆ. ಕೇವಲ ಕಥೆಯಷ್ಟೇಯಲ್ಲ ಪಾತ್ರಗಳ ಚಿತ್ರಣ ಕೂಡ ಮಹತ್ವದ್ದಾಗಿರುತ್ತದೆ. ಚಿತ್ರದ ಹಾಡೂ ಹಾಗೂ ಪ್ರೋಮೋಗಳನ್ನು ನೋಡಿದ ಬಳಿಕ ಚಿತ್ರದ ನಿರ್ಮಾಣಕಾರರು ಈ ಹಿಂದೆ ನೀಡಿದ್ದ ಹೇಳಿಕೆಗಳು ಟೊಳ್ಳು ಎಂಬುದನ್ನು ತೋರಿಸುತ್ತವೆ. 
ಚಿತ್ರ ನಿರ್ಮಾಣ ಮಾಡಲು ನಮ್ಮ ಕುಟುಂಬ ಅನುಮತಿಯನ್ನು ನೀಡಿರಲಿಲ್ಲ. ಈ ರೀತಿಯ ಚಿತ್ರವೊಂದು ನಿರ್ಮಾಣವಾಗುತ್ತಿದೆ ಎಂದು ನಮಗೆ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT