ಹೇಮಾ ಮಾಲಿನಿ 
ದೇಶ

ಮುಂಬೈ ಅಗ್ನಿ ಅವಘಡಕ್ಕೆ ಜನಸಂಖ್ಯೆ ಹೆಚ್ಚಳವೇ ಕಾರಣ: ಸಂಸದೆ ಹೇಮಾ ಮಾಲಿನಿ ವಿವಾದಾತ್ಮಕ ಹೇಳಿಕೆ

"ಮುಂಬೈ ಮಹಾನಗರಾದ ಲೋವರ್‌ ಪರೇಲ್‌ನ ಕಮಲಾ ಮಿಲ್ಸ್‌ ಆವರಣದಲ್ಲಿ ಉಂತಾದ ಅಗ್ನಿ ಅವಘಡಕ್ಕೆ ನಗರದಲ್ಲಿ ಹೆಚ್ಚು ವಲಸಿಗರಿರುವುದೇ ಕಾರಣ.

ಮುಂಬೈ: "ಮುಂಬೈ ಮಹಾನಗರಾದ ಲೋವರ್‌ ಪರೇಲ್‌ನ ಕಮಲಾ ಮಿಲ್ಸ್‌ ಆವರಣದಲ್ಲಿ ಉಂತಾದ ಅಗ್ನಿ ಅವಘಡಕ್ಕೆ ನಗರದಲ್ಲಿ ಹೆಚ್ಚು ವಲಸಿಗರಿರುವುದೇ ಕಾರಣ. ಜನಸಂಖ್ಯೆ ಹೆಚ್ಚಳದಿಂದಾಗಿ ಈ ಅಗ್ನಿ ದುರಂತ ಸಂಭವಿಸಿದೆ"  ನಟಿ, ಬಿಜೆಪಿ ಸಂಸದೆ ಹೇಮ ಮಾಲಿನಿ ಹೇಳಿದ್ದಾರೆ. ಹೇಮಾ ಅವರ ಈ ಹೇಳಿಕೆ ಇದೀಗ ಹೊಸ ವಿವಾದವನ್ನು ಹುಟ್ಟು ಹಾಕಿದೆ.
"15 ಜೀವಗಳನ್ನು ಬಲಿ ತೆಗೆದುಕೊಂಡ ಅಗ್ನಿ ದುರಂತಕ್ಕೆ ಮುಂಬೈಗೆ ಆಗಮಿಸುವ ವಲಸಿಗರು ಕಾರಣ ಮುಂಬೈ ಮಹಾನಗರಕ್ಕೆ ದೇಶದೆಲ್ಲೆಡೆಯಿಂದ ವಲಸಿಗರು ಆಗಮಿಸುತ್ತಾರೆ. ಅವರೆಲ್ಲರೂ ಇಲ್ಲಿ ನೆಲೆ ಕಂಡುಕೊಂಡಿದ್ದು ಇತ್ತೀಚೆಗೆ ಮಹಾನಗರದಲ್ಲಿ ಜನಸಂಖ್ಯಾ ಬಾಹುಳ್ಯ ವಿಪರೀತವಾಗಿದೆ. ಇದಕ್ಕಾಗಿ ನಗರಪಾಲಿಕೆ ವಲಸಿಗರನ್ನು ನಿರ್ಬಂಧಿಸಲು ಕ್ರಮ ಕೈಗೊಲ್ಳಬೇಕಾಗಿತ್ತು " ಮಥುರಾ ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.
"ಎಲ್ಲಾ ನಗರಗಳಿಗೆ ಅದರದೇ ಆದ ಮಿತಿ ಇದೆ.ಜನಸಂಖ್ಯೆ ವಿಚಾರಕ್ಕೆ ಸಹ ಅದೇ ಮಿತಿ ಅನ್ವಯವಾಗುತ್ತದೆ. ಜನಸಂಖ್ಯೆ ಮಿತಿಮೀರಿದ್ದ ಪಕ್ಷದಲ್ಲಿ ಅಂತಹಾ ನಗರದ ಪಾಲಿಕೆಗಳು ವಲಸಿಗರು ಬೇರೆ ನಗರಕ್ಕೆ ಹೊರಡುವಂತೆ ಸೂಚಿಸಬೇಕು." ಹೇಮಾ ಮಾಲಿನಿ ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರ  ಬಿಜೆಪಿ ನಾಯಕಿ ಶಾಯಿನಾ ಎನ್‌ ಸಿ ಮಾತನಾಡಿ "ಇದು ಬಹಳ ಸರಳವಾದ ವಾದವಾಯಿತು.  ಆದರೆ ನಗರಪಾಲಿಕೆ ಈ ದುರಂತವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಕಮಲಾ ಮಿಲ್ಸ್‌ ಆವರಣದೊಳಗಿನ ಅನಧಿಕೃತ, ಕಾನೂನು ಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿರುವುದೇ ಈ ದುರಂತಕ್ಕೆ ಮೂಲ. ಹೀಗೆ ಕಾನೂನು ಬಾಹಿರವಾಗಿ ಅನುಮತಿ ಇತ್ತವರನ್ನೇ ಈ ಘಟನೆಗೆ ಹೊಣೆಗಾರರನ್ನಾಗಿಸಬೇಕು" ಎಂದರು.
ಇನ್ನು ಹೇಮಾ ಮಾಲಿನಿ ಅವರ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಸದೆ ಸಂವೇದನಾ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT