ಸಂಗ್ರಹ ಚಿತ್ರ 
ದೇಶ

ಕಾಶ್ಮೀರ: ಪ್ರೇಮಿಗಳ ದಿನಾಚರಣೆಯಂದು ವಿಧ್ವಂಸಕ ಕೃತ್ಯಕ್ಕೆ ಎಲ್ಇಟಿ ಸಂಚು- ಗುಪ್ತಚರ ಇಲಾಖೆ ಎಚ್ಚರಿಕೆ

ಪ್ರೇಮಿಗಳ ದಿನಾಚರಣೆಯಂದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ...

ನವದೆಹಲಿ: ಪ್ರೇಮಿಗಳ ದಿನಾಚರಣೆಯಂದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ.

ಸಾಕಷ್ಟು ಒತ್ತಡದ ನಡುವೆ ಪಾಕಿಸ್ತಾನ ಸರ್ಕಾರ 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಉಗ್ರನಿಗೆ ಗೃಹ ಬಂಧನ ವಿಧಿಸಿದೆ. ಹಫೀಜ್ ಸಯೀದ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಬಹುಮುಖ್ಯ ನಾಯಕನಾಗಿದ್ದು. ಸಯೀದ್ ಗೃಹ ಬಂಧನ ಉಗ್ರರಿಗೆ ದೊಡ್ಡ ಹಿನ್ನಡೆಯುಂಟು ಮಾಡಿದಂತಾಗಿದೆ. ಈ ಬೆಳವಣಿಗೆಗಳು ಇದೀಗ ಉಗ್ರರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ತಮ್ಮ ಸಂಘಟನೆಯ ಬಲ ಹೆಚ್ಚಿಸಿಕೊಂಡು ಭಾರತದ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಲುವಾಗಿ ಉಗ್ರರು ಇತರೆ ಸಂಘಟನೆಗಳೊಂದಿಗೆ ಆರ್ಥಿಕ ನೆರವುಗಳನ್ನು ಕೇಳುತ್ತಿದ್ದಾರೆಂದು ತಿಳಿದುಬಂದಿದೆ.

ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರ ಸಂಘಟನೆಗಳು ಇದಕ್ಕಾಗಿ ಪಾಕಿಸ್ತಾನ ಅರೆ ಸೇನಾ ಪಡೆಯೊಂದಿಗೆ ಕೈಜೋಡಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇನ್ನು ಗೃಹ ಬಂಧನದಲ್ಲಿದ್ದುಕೊಂಡೇ ಸಯೀದ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದು, ಪಾಕಿಸ್ತಾನ ತೋರ್ಪಡಿಸುವಿಕೆಗಾಗಿ ಗೃಹ ಬಂಧನ ವಿಧಿಸಿದೆ ಎಂಬುದು ಖಚಿತವಾಗುತ್ತಿದೆ.

ಕಾಶ್ಮೀರದಲ್ಲಿ ಫೆಬ್ರವರಿ 5 ರಂದು ವಾರ್ಷಿಕ ದಿನಾಚರಣೆಯೆಂದು ಪ್ರತೀವರ್ಷ ಆಚರಣೆ ಮಾಡಲಾಗುತ್ತದೆ. ಇದರಂತೆ ನಿನ್ನೆ ಕೂಡ ಕಾಶ್ಮೀರದಲ್ಲಿ ಎಲ್ಇಟಿ ಮತ್ತು ಜೆಯುಡಿ ಉಗ್ರ ಸಂಘಟನೆಗಳು ವಾರ್ಷಿಕ ವರ್ಷಾಚರಣೆಯನ್ನು ಮಾಡಿತ್ತು. ವರ್ಷಾಚರಣೆಯನ್ನುದ್ದೇಶಿ ಸಯೀದ್ ಹೇಳಿಕೆಯನ್ನು ನೀಡಿದ್ದು, ಭಾರತವನ್ನು ನಾಶಪಡಿಸುವಂತೆ ಕರೆ ನೀಡಿದ್ದಾನೆಂದು ತಿಳಿದುಬಂದಿದೆ.

ಕಾರ್ಯಕ್ರಮಕ್ಕೆ 40 ಹೆಚ್ಚು ವಿವಿಧ ಜಿಹಾದಿ ಸಂಘಟನೆಗಳು ಭಾಗಿಯಾಗಿದ್ದು, ಸಯೀದ್ ಕರೆಗೆ ಎಲ್ಲಾ ಉಗ್ರರು ಐಕಮತ್ಯ ಪ್ರದರ್ಶಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಂತೆ ಪ್ರೇಮಿಗಳ ದಿನಾಚರಣೆ ಹತ್ತಿರಬರುತ್ತಿದ್ದು, ಕಾಶ್ಮೀರದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಕಾಶ್ಮೀರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಜನರನ್ನು ಹತ್ಯೆ ಮಾಡುವಂತೆ ಉಗ್ರರಿಗೆ ಕರೆ ನೀಡಲಾಗಿದೆ. ಇದಲ್ಲದೆ, ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲಿರಿಸುವಂತೆ ಉಗ್ರರಿಗೆ ತಿಳಿಸಲಾಗಿದ್ದು, ಪ್ರೇಮಿಗಳ ದಿನಾಚರಣೆ ಆಚರಿಸುವ ದೇಶಗಳ ಮೇಲೂ ದಾಳಿ ಮಾಡಿ ಹೊಸ ಅಭಿಯಾನವನ್ನು ಆರಂಭಿಸುವಂತೆ ತಿಳಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT