ದೀಪಾ ಜಯಕುಮಾರ್ 
ದೇಶ

ಜನ ಹೆದರಬಹುದು, ಆದರೆ ಶಶಿಕಲಾಗೆ ನಾನು ಹೆದರುವುದಿಲ್ಲ: ಜಯಾ ಸೊಸೆ ದೀಪಾ ಜಯಕುಮಾರ್

ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೇರಲು ಸಿದ್ಧತೆ ನಡೆಸಿರುವಂತೆಯೇ ಅತ್ತ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಶಶಿಕಲಾ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಚೆನ್ನೈ: ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೇರಲು ಸಿದ್ಧತೆ ನಡೆಸಿರುವಂತೆಯೇ ಅತ್ತ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಶಶಿಕಲಾ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಮಂಗಳವಾರ ಎಐಎಡಿಎಂಕೆ ಮುಖಂಡ ಪಾಂಡಿರಾಜನ್ ಜಯಾ ಸಾವಿಗೆ ಸಂಬಂಧಿಸಿದಂತೆ ಸ್ಫೋಟಕ ಆರೋಪ ಮಾಡಿದ ಬೆನ್ನಲ್ಲೇ ಚೆನ್ನೈ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ ಅವರ ಸಹೋದರನ ಮಗಳಾದ ದೀಪಾ ಜಯಕುಮಾರ್ ಅವರು, "ಶಶಿಕಲಾ ಮುಖ್ಯಮಂತ್ರಿಯಾಗುತ್ತಿರುವುದು ಈ ರಾಜ್ಯದ  ಕೆಟ್ಟದಿನವಾಗಿದೆ. ಚುನಾಯಿತ ನಾಯಕರಷ್ಟೇ ಮುಖ್ಯಮಂತ್ರಿಯಾಗಬೇಕು. ಶಶಿಕಲಾ ಜನರಿಂದ ಚುನಾಯಿತರಾಗಿಲ್ಲ ಎಂಬುದು  ಎಲ್ಲರಿಗೂ ತಿಳಿದಿದೆ. ಶಶಿಕಲಾ ಚುನಾಯಿತ ನಾಯಕಿಯಲ್ಲ, ಸಿಎಂ ಸ್ಥಾನಕ್ಕೆ ಅವರು ಅರ್ಹರಲ್ಲ ಎಂದು ಅವರು ಹೇಳಿದ್ದಾರೆ.

ಸಿಎಂ ಆಗೋಕೆ 33 ವರ್ಷದ ಸ್ನೇಹವೇ ಮಾನದಂಡವಲ್ಲ. ಸಿಎಂ ಪದವಿ ಕುರಿತು ಜನಾದೇಶವೇ ಅಂತಿಮ ಮಾನದಂಡವಾಗಿರುತ್ತದೆ. ಆದರೆ ಶಶಿಕಲಾ ಯಾವುದೇ ಚುನಾವಣೆಯಲ್ಲೂ ಗೆದ್ದವರಲ್ಲ. ಇದು ತಮಿಳುನಾಡು ಜನತೆಗೆ  ಕೆಟ್ಟಕಾಲವಾಗಿದ್ದು, ತಮ್ಮ ಭವಿಷ್ಯದ ಕುರಿತು ಜನ ಚಿಂತಿಸುವಂತಾಗಿದೆ. ಶಶಿಕಲಾ ಅವರಿದೆ ಜನ ಭಯ ಪಡಬಹುದು. ಆದರೆ ನಾನಲ್ಲ. ಶಶಿಕಲಾ ಅವರ ಯಾವುದೇ ಬೆದರಿಕೆಗೂ ನಾನು ಜಗ್ಗುವುದಿಲ್ಲ. ನಾನು ನಾಯಕಿಯಾಗಬೇಕು  ಎಂದರೆ ನನ್ನನ್ನು ಜನ ಚುನಾವಣೆಯಲ್ಲಿ ಗೆಲ್ಲಿಸಿದರೇ ಮಾತ್ರ ನಾನು ನಾಯಕಿಯಾಗಲು ಸಾಧ್ಯ. ಜಯಾ ಅವರ ಆಸ್ತಿಗಾಗಿ ನಾನು ಇಲ್ಲಿ ನಿಂತಿಲ್ಲ. ನನ್ನ ಅತ್ತೆಗೋಸ್ಕರ ಮತ್ತು ಅಪೂರ್ಣಗೊಂಡಿರುವ ಅವರ ಕೆಲಸವನ್ನು  ಪೂರ್ಣಗೊಳಿಸಬೇಕಿದೆ.  ಹೀಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.

ಇದೇ ವೇಳೆ ಜಯಾ ಅನಾರೋಗ್ಯದ ಸಂದರ್ಭದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪಾ ಜಯಕುಮಾರ್ ಅವರು, "ಜಯಾರನ್ನು ಆನಾರೋಗ್ಯದ ಕಾರಣವೊಡ್ಡಿ ಆಸ್ಪತ್ರೆಗೆ ದಾಖಲು ಮಾಡಿದ ಮೊದಲ  ದಿನದಿಂದಲೇ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ ನನ್ನನ್ನು ಆಸ್ಪತ್ರೆಯೊಳಗೆ ಬಿಟ್ಟಿರಲಿಲ್ಲ. ಶಶಿಕಲಾ ನನ್ನ ಆಸ್ಪತ್ರೆ ಭೇಟಿಯನ್ನು ಬೇಕೆಂದೇ ತಡೆದಿದ್ದರು ಎಂದು ಆರೋಪಿಸಿದರು.

ವೈದ್ಯರ ಸುದ್ದಿಗೋಷ್ಠಿ ಪೂರ್ವ ನಿಯೋಜಿತ ಮತ್ತು ಪಕ್ಷಪಾತದ್ದು
ಇದೇ ವೇಳೆ ಜಯಾ ಸಾವಿನ ಕುರಿತಂತೆ ಅಪೋಲೋ ಆಸ್ಪತ್ರೆ ವೈದ್ಯರು ಕರೆದಿದ್ದ ಸುದ್ದಿಗೋಷ್ಠಿಯನ್ನು ಪೂರ್ವ ನಿಯೋಜಿತ ಮತ್ತು ಪಕ್ಷಪಾತದ್ದು ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT