ಕನ್ಸಾಸ್ ಶೂಟಿಂಗ್: ಭಾರತೀಯ ಟೆಕ್ಕಿ ಶ್ರೀನಿವಾಸ್ ಮೃತದೇಹ ಹೈದರಾಬಾದ್'ಗೆ 
ದೇಶ

ಕನ್ಸಾಸ್ ಶೂಟಿಂಗ್: ಹೈದರಾಬಾದ್ ನಲ್ಲಿ ಟೆಕ್ಕಿ ಶ್ರೀನಿವಾಸ್ ಅಂತ್ಯ ಸಂಸ್ಕಾರ

ಅಮೆರಿಕಾದ ಕನ್ಸಾಸ್ ನಗರದ ಬಾರೊಂದರಲ್ಲಿ ನಡೆದಿದ್ದ ಶೂಟೌಟ್'ನಲ್ಲಿ ಹತ್ಯೆಗೀಡಾಗಿದ್ದ ಭಾರತ ಮೂಲದ ಶ್ರೀನಿವಾಸ್ ಕುಚಿಬೋಟ್ಲಾ ಅವರ ಮೃತ ದೇಹವನ್ನು ಸೋಮವಾರ ರಾತ್ರಿ...

ಹೈದರಾಬಾದ್: ಅಮೆರಿಕಾದ ಕನ್ಸಾಸ್ ನಗರದ ಬಾರೊಂದರಲ್ಲಿ ನಡೆದಿದ್ದ ಶೂಟೌಟ್'ನಲ್ಲಿ ಹತ್ಯೆಗೀಡಾಗಿದ್ದ ಭಾರತ ಮೂಲದ ಶ್ರೀನಿವಾಸ್ ಕುಚಿಬೋಟ್ಲಾ ಅವರ ಮೃತ ದೇಹವನ್ನು ಸೋಮವಾರ ರಾತ್ರಿ ಹೈದರಾಬಾದ್'ಗೆ ಕರೆ ತರಲಾಗಿದೆ. 
ಪಾರ್ಥೀವ ಶರೀರರವನ್ನು ಸ್ವೀಕಾರ ಮಾಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್ ಪೋಷಕರು ಮಗನ ಶವವನ್ನು ಕಂಡು ದುಃಖಿತರಾದರು. ಏರ್ ಇಂಡಿಯಾ ವಿಮಾನದ ಮೂಲಕ ತರಲಾದ ಪಾರ್ಥೀವ ಶರೀರದ ಜೊತೆಗೆ ಶ್ರೀನಿವಾಸ್ ಪತ್ನಿ ಸುನಯನಾ ದುಮಲಾ ಮತ್ತು ಸಹೋರದ ಅವರು ಕೂಡ ಆಗಮಿಸಿದ್ದರು. 
ಶ್ರೀನಿವಾಸ್ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಸಕಲ ಸರ್ಕಾರ ಗೌರವಗಳೊಂದಿಗೆ ಇಂದು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಜತೆಗೂಡಿ ಅಮೆರಿಕಾದ ಕನ್ಸಾಸ್ ನಗರದ ಬಾರ್ ವೊಂದಕ್ಕೆ ಶ್ರೀನಿವಾಸ್ ಅವರು ತೆರಳಿದ್ದರು. ಈ ವೇಳೆ ಅಮೆರಿಕಾದ ನೌಕಾಪಡೆಯ ನಿವೃತ್ತ ಯೋಧ ಅ್ಯಡಂ ಪ್ಯೂರಿಂಟನ್ ಎಂಬಾತ ಶ್ರೀನಿವಾಸ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಅಲ್ಲದೆ, ಅಮೆರಿಕ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗಾಡಿದ್ದ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT