ದೇಶ

ಮಧ್ಯಪ್ರದೇಶ ರೈತನಿಗೆ ಗಾಂಧಿ ಚಿತ್ರ ಇಲ್ಲದ 2000 ರು. ನೋಟ್ ನೀಡಿದ ಬ್ಯಾಂಕ್!

Lingaraj Badiger
ಭೋಪಾಲ್‌: ಸಾರ್ವಜನಿಕ ವಲಯದ ಬ್ಯಾಂಕ್‌ ವೊಂದು ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ರೈತನಿಗೆ ಮಹಾತ್ಮ ಗಾಂಧಿ ಚಿತ್ರವಿಲ್ಲದ ಹೊಸ 2000 ರುಪಾಯಿ ನೋಟ್ ನೀಡಿದ್ದು, ಹಣ ಪಡೆದ ರೈತ ದಿಗ್ಭ್ರಮೆಗೊಂಡಿದ್ದಾನೆ.
ರೈತ ಲಕ್ಷ್ಮಣ್‌ ಮೀನಾ ಎಂಬುವವರು ಶಿಯೋಪುರ ಜಿಲ್ಲೆಯ ಬರೋಡಾದಲ್ಲಿನ ಬ್ಯಾಂಕ್‌ ಖಾತೆಯಿಂದ ಹಣ ಪಡೆದಿದ್ದು, 2 ಸಾವಿರ ರುಪಾಯಿ ಮುಖಬೆಲೆಯ ಮೂರು ನೋಟುಗಳನ್ನು ಬ್ಯಾಂಕ್‌ ಸಿಬ್ಬಂದಿ ನೀಡಿದ್ದಾರೆ.
ಮಂಗಳವಾರ ಬ್ಯಾಂಕ್‌ನಿಂದ ಹಣ ಪಡೆದಿದಿರುವ ರೈತ ತಡವಾಗಿ ನೋಟುಗಳನ್ನು ಗಮನಿಸಿದ್ದು, ನೋಟಿನಲ್ಲಿ ಗಾಂಧೀಜಿ ಚಿತ್ರವೇ ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಮಾರುಕಟ್ಟೆಯಿಂದ ಬ್ಯಾಂಕ್‌ಗೆ ಮರಳಿ ಈ ಕುರಿತು ಮ್ಯಾನೇಜರ್‌ ಗಮನಕ್ಕೆ ತಂದಿದ್ದಾರೆ.
ಪರಿಶೀಲಿಸಿರುವ ಅಧಿಕಾರಿಗಳು ನೋಟು ಅಸಲಿ ಎಂದು ದೃಢಪಡಿಸಿದ್ದಾರೆ. ಮುದ್ರಣ ದೋಷದಿಂದ ಈ ರೀತಿ ಆಗಿರಬಹುದೆಂದು ಅಭಿಪ್ರಾಯ ಪಟ್ಟಿರುವ ಬ್ಯಾಂಕ್‌ ಸಿಬ್ಬಂದಿ ಆ ನೋಟುಗಳನ್ನು ಖಾತೆಗೆ ಜಮೆ ಮಾಡುವಂತೆ ರೈತನಿಗೆ ಸೂಚಿಸಿದ್ದಾರೆ.
SCROLL FOR NEXT