ಅಮರನಾಥ ಯಾತ್ರಿಕರು (ಸಂಗ್ರಹ ಚಿತ್ರ) 
ದೇಶ

ಅಮರನಾಥ ದಾಳಿಯ ಉಗ್ರರು ಪೊಲೀಸ್ ಸಮವಸ್ತ್ರ ಧರಿಸಿದ್ದರು: ಬದುಕುಳಿದವರ ಪ್ರತಿಕ್ರಿಯೆ

ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ನಡೆಸಿದವರು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಭಯೋತ್ಪಾದಕ ದಾಳಿಯ ಉಗ್ರರ ದಾಳಿಯಿಂದ ಬದುಕುಳಿದವರು ಹೇಳಿದ್ದಾರೆ.

ನವದೆಹಲಿ: ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ನಡೆಸಿದವರು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಭಯೋತ್ಪಾದಕ ದಾಳಿಯ ಉಗ್ರರ ದಾಳಿಯಿಂದ ಬದುಕುಳಿದವರು ಹೇಳಿದ್ದಾರೆ. 
5 ಜನ ರಸ್ತೆಯ ಮೇಲೆ ನಿಂತಿದ್ದರು, ಇನ್ನಿಬ್ಬರು ಮೋಟಾರ್ ಬೈಕ್ ನಲ್ಲಿ ಬಂದು ಗುಂಡು ಹಾರಿಸತೊಡಗಿದರು, ಅವರೆಲ್ಲರೂ ಪೊಲೀಸ್ ಸಮವಸ್ತ್ರದಲ್ಲಿದ್ದರು, ಪೊಲೀಸರೇಕೆ ನಮ್ಮತ್ತ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಅಚ್ಚರಿಯಾಯಿತು ಎಂದು ಉಗ್ರರ ದಾಳಿಯಲ್ಲಿ ಬದುಕುಳಿದಿರುವ ಭಾಗ್ಯಮಣಿ ಠಾಕೂರ್ ಹೇಳಿದ್ದಾರೆ. 
ಓರ್ವ ಭಯೋತ್ಪಾದಕ ಬಸ್ ನೊಳಗೆ ನುಗ್ಗಲೂ ಯತ್ನಿಸಿದ, ಆದರೆ ಕ್ಲೀನರ್ ಬಸ್ ನ ಬಾಗಿಲು ಹಾಕಿದರು, ಈ ಘಟನೆಯಾದ ಬಳಿಕ 10-15 ನಿಮಿಷ ಡ್ರೈವ್ ಮಾಡಿದ ನಂತರ ಚಾಲಕ ಬಸ್ ನ್ನು ಸೇನಾ ವಾಹನಗಳ ನಡುವೆ ನಿಲ್ಲಿಸಿದರು. ಆ ವೇಳೆಗೆ ಗುಂಡಿನ ಮೊರೆತದ ಸದ್ದು ಕೇಳಿದ್ದ ಸೇನಾ ಪಡೆ ನಮ್ಮತ್ತ ಧಾವಿಸುತ್ತಿತ್ತು ಎಂದು ಬದುಕುಳಿದ ಯಾತ್ರಾರ್ಥಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT