ಹೈದರಾಬಾದ್: ಕುಡುಕ ಪತಿರಾಯ ಗರ್ಭಿಣಿ ಪತ್ನಿ ಮತ್ತೊಮ್ಮೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ಶಂಕಿಸಿ ಸೀಮೆಎಣ್ಣೆ ಸುರಿದು ಪತ್ನಿ ಮತ್ತು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಹೈದರಾಬಾದ್ ಹೊರವಲಯದ ನಿಬಿ ನಗರದ ನಿವಾಸಿಯಾಗಿರುವ ಶಂಕರ್ ನಾಯಕ್ ಎಂಬಾತ ಈ ದುಷ್ಕೃತ್ಯ ಎಸಗಿರುವ ಪಾಪಿ. ಗರ್ಭಿಣಿಯಾಗಿದ್ದ 25 ವರ್ಷದ ಸಾವಿತ್ರಿ ಮತ್ತು 6 ವರ್ಷದ ದೊಡ್ಡ ಮಗಳು ಸಜೀವ ದಹನವಾಗಿದ್ದು ಐದು ವರ್ಷದ ಎರಡನೇ ಹೆಣ್ಣು ಮಗು ಬದುಕಿ ಉಳಿದಿದ್ದಾಳೆ.
ಶಂಕರ್ ನಾಯಕ್ ಕಳೆದ ಏಳು ವರ್ಷದ ಹಿಂದೆ ಸಾವಿತ್ರಿಯನ್ನು ವಿವಾಹವಾಗಿದ್ದ ಇವರಿಗೆ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಸಾವಿತ್ರಿ ಮತ್ತೆ ಗರ್ಭಿಣಿಯಾಗಿದ್ದಳು. ಮೊದಲೆರಡು ಮಕ್ಕಳು ಹೆಣ್ಣಾಗಿದ್ದರಿಂದ ಮೂರನೇ ಮಗುವು ಹೆಣ್ಣು ಮಗುವಾಗುತ್ತದೆ ಎಂದು ಹೆದರಿದ ಶಂಕರ್ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೆಂಡತಿ ಮತ್ತು ಮಗಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಂಕರ್ ನಾಯಕ್ ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.