ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ 
ದೇಶ

ಜಾನುವಾರು ಹತ್ಯೆ ನಿಷೇಧ; ಪ್ರತಿಕೂಲತೆಯ ಬಗ್ಗೆ ಎಚ್ಚರಿಸಿದ ಮುಖ್ಯ ಆರ್ಥಿಕ ಸಲಹೆಗಾರ

ಜಾನುವಾರು ಹತ್ಯೆ ನಿಷೇಧ ಕಾನೂನು ಭಾರತದಲ್ಲಿ ಜಾನುವಾರು ಸಾಕಾಣೆಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿರುವ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ

ನವದೆಹಲಿ: ಜಾನುವಾರು ಹತ್ಯೆ ನಿಷೇಧ ಕಾನೂನು ಭಾರತದಲ್ಲಿ ಜಾನುವಾರು ಸಾಕಾಣೆಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿರುವ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಈ ಕಾಯ್ದೆಯ ವಿರುದ್ಧ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. 
ಕೃಷಿ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ (ಎನ್ ಎ ಎ ಎಸ್) ನಲ್ಲಿ ಸೋಮವಾರ ಸಂಜೆ ಮಾತನಾಡಿದ ಸುಬ್ರಮಣಿಯನ್, ಸಾಮಾಜಿಕ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ ಆದರೆ ಅಂತಹ ನೀತಿಗಳಿಂದ ಉಂಟಾಗಬಲ್ಲ ಆರ್ಥಿಕ ನಷ್ಟವನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. 
"ಹಾಲು ಉತ್ಪಾದನೆ ಮತ್ತು ಜಾನುವಾರು ಸಾಕಾಣೆ, ಈ ಎರಡು ಕ್ಷೇತ್ರಗಳ ಮೇಲೆ ಒತ್ತು ನೀಡುವುದು ಅವಶ್ಯಕ. ಸಾಮಾಜಿಕ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ ಆದರೆ ಅಂತಹ ನೀತಿಗಳಿಂದ ಉಂಟಾಗಬಲ್ಲ ಆರ್ಥಿಕ ನಷ್ಟಗಳ ಬಗ್ಗೆ ಸಂಪೂರ್ಣ ಅರಿವಿರಬೇಕು.
"ಸಾಮಾಜಿಕ ನೀತಿಗಳು ಜಾನುವಾರು ಮಾರುಕಟ್ಟೆಯ ಕಾರ್ಯಚಟುವಟಿಕೆಗಳಿಗೆ ಹೊಡೆತ ನೀಡಿದರೆ, ಜಾನುವಾರು ಸಾಕಣೆ ಕ್ಷೇತ್ರದ ಆರ್ಥಿಕತೆಗೆ ಅದು ಒಡ್ಡಬಲ್ಲ ತೊಂದರೆ ದುಬಾರಿಯಾಗಲಿದೆ. ಇದನ್ನು ಲೆಕ್ಕ ಹಾಕಿ, ಸರಿಯಾದ ಆಯ್ಕೆ ಮಾಡಬೇಕಾಗುತ್ತದೆ " ಎಂದಿದ್ದಾರೆ ಆರ್ಥಿಕತಜ್ಞ.  
ಜಾನುವಾರು ಸಾಕಾಣೆಯ ಆರ್ಥಿಕತೆಯನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ ಎಂದು ಒತ್ತಿ ಹೇಳಿರುವ ಅವರು, ಉಪಯೋಗಕ್ಕೆ ಬಾರದ ಜಾನುವಾರುಗಳನ್ನು ವಿಲೇವಾರಿ ಮಾಡುವುದರಿಂದ ದೊರಕುವ ಹಣ, ಜನಜೀವನದ ಹಣೆಬರಹ ಮತ್ತು ಭವಿಷ್ಯವನ್ನು ಕಾಪಾಡುತ್ತದೆ. 
"ಸಾಮಾಜಿಕ ನೀತಿಗಳು ಇಂತಹ ವರಮಾನವನ್ನು ವಂಚಿಸಿದರೆ, ಇದರಿಂದ ಜಾನುವಾರು ಸಾಕಾಣೆ ಕಡಿಮೆ ಲಾಭವುಳ್ಳ ಕೃಷಿಯಾಗಿ ಮಾರ್ಪಾಡಾಗುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ. 
ಉಪಯೋಗಕ್ಕೆ ಬಾರದ ಜಾನುವಾರುಗಳನ್ನು ವಿಲೇವಾರಿ ಮಾಡುವುದರಿಂದ ದೊರಕುವ ಲಾಭ ಬಿದ್ದುಹೋಗುವುದಕ್ಕೆ ಎರಡು ಕಾರಣಗಳಿರುತ್ತವೆ. ಒಂದು ಜಾನುವಾರು ಮಾಂಸಾದಿಂದ ಒದಗುವ ಹಣ ಕಡಿಮೆಯಾಗುವುದು ಮತ್ತು ಉಪಯೋಗವಿಲ್ಲದ ಜಾನುವಾರುಗಳನ್ನು ಸಾಕಲು ಹಣ ವ್ಯಯಿಸುವುದು.
"ಇಷ್ಟೇ ಅಲ್ಲ, ಸಾಮಾಜಿಕ ನೀತಿಗಳು ಒಟ್ಟಾರೆ ಸಮಾಜದ ವರಮಾನಕ್ಕೂ ಪ್ರತಿಕೂಲವಾಗಬಹುದು. ಬೀದಿಯಲ್ಲಿ ಅಡ್ಡಾಡುವ ಹಸುಗಳು ಹೆಚ್ಚಳವಾಗಬಹುದು. ಅವುಗಳನ್ನು ನೋಡಿಕೊಳ್ಳುವ, ಆರೈಕೆ ಮಾಡಲು ಹೆಚ್ಚು ಹಣ ವ್ಯವ ಮಾಡಬೇಕಾಗುತ್ತದೆ. ಕಾಲುಬಾಯಿ ರೋಗ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ತೊಂದರೆಗಳು ಉಲ್ಬಣಿಸಿ, ಸಾಮಾಜಿಕ ವ್ಯಯ ಹೆಚ್ಚಳವಾಗುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ. 
ಜಾನುವಾರು ಹತ್ಯೆ ಮತ್ತು ಮಾರಾಟದ ಮೇಲೆ ಹೆಚ್ಚಿನ ನಿರ್ಬಂಧ ಹೇರಿ ಕೇಂದ್ರ ಪರಿಸರ ಸಚಿವಾಲಯ ಕಳೆದ ತಿಂಗಳು ರೂಪಿಸಿದ್ದ ಹೊಸ ನೀತಿಯ ವಿರುದ್ಧ ವ್ಯಾಪಾ ಟೀಕೆಗಳು ವ್ಯಕ್ತವಾಗಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT