ಕಪಿಲ್ ಮಿಶ್ರಾ 
ದೇಶ

ಕೇಜ್ರಿವಾಲ್ ನಿವಾಸದಲ್ಲಿ ಹೈಡ್ರಾಮಾ: ಸಿಎಂ ಜನತಾ ದರ್ಬಾರ್ ನಿಂದ ಹೊರದಬ್ಬಿಸಿಕೊಂಡ ಕಪಿಲ್ ಮಿಶ್ರಾ

ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಯಾಗಿರುವ ಕಪಿಲ್ ಮಿಶ್ರಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದೊಳಗೆ ತೆರಳುವುದಕ್ಕೆ ಅನುಮತಿ ...

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಯಾಗಿರುವ ಕಪಿಲ್ ಮಿಶ್ರಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದೊಳಗೆ ತೆರಳುವುದಕ್ಕೆ ಅನುಮತಿ ನಿರಾಕರಿಸಲಾಗಿದೆ.
ಕೇಜ್ರಿವಾಲ್ ನಿವಾಸ ಜನತಾ ದರ್ಬಾರ್ ಗೆ ಕಪಿಲ್ ಮಿಶ್ರಾ ತಮ್ಮ ಆಪ್ತರೊಡನೆ ತೆರಳಿದ್ದರು. ತಾವು ಕೇಜ್ರಿವಾಲ್ ಅವರನ್ನು ಭೇಟಿ ಮಾಡುವುದಕ್ಕಾಗಿ ಹೋಗುತ್ತಿರುವುದಾಗಿ ಹೇಳಿದ್ದರು.
ಆದರೆ ಅವರು ಒಳಗೆ ಹೋಗಲು ಬಿಡದೇ ಬಾಗಿಲಲ್ಲಿಯೇ ಅವರನ್ನು ತಡೆಯಲಾಯಿತು. ತಾವು ಕೇಜ್ರಿವಾಲ್ ರನ್ನು ಭೇಟಿ ತಮ್ಮನ್ನು ವಜಾ ಮಾಡಿದ ಪಕ್ಷ ಇನ್ನೂ ಏಕೆ ಸತ್ಯೇಂದ್ರ ಜೈನ್ ಅವರನ್ನು ವಜಾ ಮಾಡಿಲ್ಲ ಎಂದು ಪ್ರಶ್ನಿಸಲು ಆಗಮಿಸಿದ್ದರು.
ಆದರೆ ಸಿಎಂ ನಿವಾಸಕ್ಕೆ ಹೋಗಲು ಅನುಮತಿ ನೀಡದ ಕಾರಣ ಮಿಶ್ರಾ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಇನ್ನೂ ಸತ್ಯೇಂದ್ರ ಜೈನ್ ವಿರುದ್ದ ಮತ್ತೆ ಹೊಸ ಆರೋಪ ಮಾಡಿರುವ ಕಪಿಲ್ ಮಿಶ್ರಾ, 2013 ರಿಂದ 2016 ರ ನಡುವೆ ಜೈನ್ ದೆಹಲಿಯ ಗ್ರಾಮಾಂತರ ಭಾಗದಲ್ಲಿ ಸುಮಾರು 80 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT