ದೇಶ

ವೈಷ್ಣೋದೇವಿ ಮಂದಿರಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ: ಅಧಿಕಾರಿಗಳಿಂದ ವಿಶೇಷ ಭದ್ರತೆ

Manjula VN
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ. 
ಪ್ರತಿನಿತ್ಯ 40,000 ರಿಂದ 50,000ಕ್ಕೂ ಹೆಚ್ಚು ಭಕ್ತರು ವೈಷ್ಣೋದೇವಿ ಮಂದಿರಕ್ಕೆ ಬರುತ್ತಿದ್ದು, ಮಂದಿರದಲ್ಲಿ ಜನರ ಸಂಖ್ಯೆ ಹೆಚ್ಚಾಗತೊಡಗಿದೆ ಎಂದು ಮಂದಿರದ ಮುಖ್ಯ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರು ಹೇಳಿದ್ದಾರೆ. 
ನಿನ್ನೆ ಕೂಡ 49,000 ಭಕ್ತಾದಿಗಳು ಕತ್ರಾಗೆ ಬಂದಿದ್ದಾರೆ. ಮಾರ್ಚ್ 11 ರವರೆಗೂ 6.83 ಲಕ್ಷ ಭಕ್ತರು ಮಂದಿರಕ್ಕೆ ಬಂದಿದ್ದಾರೆ. ಪ್ರಸಕ್ತ ವರ್ಷದ ಜೂನ್ 10ರವರೆಗೂ ದೇಶದ ವಿವಿಧ ಭಾಗಗಳಿಂದ 36 ಲಕ್ಷಕ್ಕೂ ಅಧಿಕ ಭಕ್ತರು ಮಂದಿರಕ್ಕೆ ಭೇಟಿ ನೀಡಲಿದ್ದಾರೆ, ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT