ವೈದ್ಯಕೀಯ ಪರೀಕ್ಷೆಗೆ ಇಂದ್ರಾಣಿ ಮುಖರ್ಜಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು 
ದೇಶ

ಇಂದ್ರಾಣಿ ಮುಖರ್ಜಿ ಮೈಮೇಲೆ ವಸ್ತುವಿನಿಂದ ಹಲ್ಲೆಯಾದ ಗಾಯಗಳಿವೆ: ವೈದ್ಯಕೀಯ ವರದಿ

ಶೀನಾ ಬೊರಾ ಹತ್ಯೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯವರ ಕೈಗಳು ಮತ್ತು ದೇಹದ ಇತರ...

ಮುಂಬೈ: ಶೀನಾ ಬೊರಾ ಹತ್ಯೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯವರ ಕೈಗಳು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿ ಹೇಳುತ್ತದೆ. ಬೈಸುಲ್ಲ ಜೈಲಿನಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದ್ದು ಇಂದ್ರಾಣಿ ಮುಖರ್ಜಿ ಮತ್ತು ಜೈಲಿನ ಇತರ ಕೈದಿಗಳ ಮಧ್ಯೆ ಜಗಳಗಳಾಗಿದ್ದವು ಎಂದು ವರದಿಯಾಗಿತ್ತು. ಈ ಸಂದರ್ಭದಲ್ಲಿ ಇಂದ್ರಾಣಿ ಮುಖರ್ಜಿಯವರಿಗೆ ಆಯುಧದಿಂದ ಹೊಡೆದಿದ್ದರು.
ಮಹಿಳಾ ಕಾರಾಗೃಹದಲ್ಲಿ ಹಿಂಸಾಚಾರ ನಡೆದ ಬಗ್ಗೆ ಇಂದ್ರಾಣಿ ಮುಖರ್ಜಿ ವಿರುದ್ಧ ಕೇಸು ದಾಖಲಾಗಿತ್ತು. ಇದಕ್ಕೆ ಮೊನ್ನೆ ಮಂಗಳವಾರ ಕೋರ್ಟ್ ಮೊರೆ ಹೋದ ಇಂದ್ರಾಣಿ ಮುಖರ್ಜಿ, ಆರೋಪಿಯೊಬ್ಬರ ಕೊಲೆಗೆ ಸಂಬಂಧಪಟ್ಟಂತೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾಗ  ಜೈಲಿನ ಅಧಿಕಾರಿಗಳು ತಮಗೆ ಹೊಡೆದಿದ್ದರು ಎಂದು ಆರೋಪಿಸಿದ್ದರು. 
ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ತಾವು ಇಂದ್ರಾಣಿಯವರನ್ನು ಭೇಟಿ ಮಾಡಲು ಹೋಗಿದ್ದು, ಮಹಿಳಾ ಕೈದಿಯೊಬ್ಬರ ಸಾವಿಗೆ ಸಂಬಂಧಪಟ್ಟಂತೆ ತಮಗೆ ಜೈಲಿನ ಅಧಿಕಾರಿಗಳು ಹೊಡೆದರು ಎಂದು ಇಂದ್ರಾಣಿ  ತಮ್ಮ ಅಳಲನ್ನು ತೋಡಿಕೊಂಡರೆಂದು ತಿಳಿಸಿದ್ದಾರೆ.
ಅವಳ ಕೈ, ಕಾಲುಗಳು ಮತ್ತು ತಲೆಗಳಲ್ಲಿ ಆದ ಗಾಯಗಳನ್ನು ತೋರಿಸಿದರು ಎಂದು ವಕೀಲರು ಅರ್ಜಿಯಲ್ಲಿ ತೋರಿಸಿದ್ದಲ್ಲದೆ ಜೈಲಿನ ಸಿಬ್ಬಂದಿ ಹಾಗೂ ಸೂಪರಿಂಟೆಂಡೆಂಟ್ ತಮಗೆ ಬೈದಿದ್ದಾರೆ ಎಂದು ಹೇಳಿದರು ಎಂದು ಸಹ ಅರ್ಜಿಯಲ್ಲಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಇಂದ್ರಾಣಿ ಮುಖರ್ಜಿಯವರನ್ನು ವೈದ್ಯಕೀಯ ಪರೀಕ್ಷೆಗೆ ಮುಂಬೈಯ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT