ದೇಶ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: 5 ನಾಯಕರಿಗೆ ಪ್ರಚಾರ ಮೇಲುಸ್ತುವಾರಿ ವಹಿಸಿದ ಅಮಿತ್ ಶಾ

Lingaraj Badiger
ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅಧಿಪತ್ಯ ಸ್ಥಾಪಿಸಿದ ನಂತರ ಈಗ ರಾಷ್ಟ್ರ ರಾಜಧಾನಿ ದೆಹಲಿಯ ಮಹಾನಗರ ಪಾಲಿಕೆಗಳ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಐವರು ನಾಯಕರನ್ನು ಚುನಾವಣಾ ಪ್ರಚಾರ ಮೇಲುಸ್ತುವಾರಿಗಳಾಗಿ ಶನಿವಾರ ನೇಮಕ ಮಾಡಿದ್ದಾರೆ.
ನಿರ್ಮಾಲಾ ಸೀತಾರಾಮನ್, ವಿ.ಸಹಸ್ರಬುದ್ದೆ, ಜಿತೇಂದ್ರ ಸಿಂಗ್, ಸಂಜೀವ್ ಬಲ್ಯಾನ್ ಹಾಗೂ ಶ್ಯಾಮ್ ಜಾಜು ಅವರನ್ನು ದೆಹಲಿ ಮಹಾನಗರ ಪಾಲಿಕೆಗಳ ಚುನಾವಣಾ ಪ್ರಚಾರ ಮೇಲುಸ್ತುವಾರಿಗಳಾಗಿ ನೇಮಕಗೊಂಡಿದ್ದಾರೆ.
ಮುಂದಿನ ತಿಂಗಳಾಂತ್ಯಕ್ಕೆ ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.
2012ರಲ್ಲಿ ದೆಹಲಿ ಮಹಾನಗರ ಪಾಲಿಕೆಯನ್ನು ಉತ್ತರ, ದಕ್ಷಿಣ ಹಾಗೂ ಪೂರ್ವ ದೆಹಲಿ ಮಹಾನಗರ ಪಾಲಿಕೆಗಳಾಗಿ ವಿಭಜನೆ ಮಾಡಲಾಗಿದೆ.
SCROLL FOR NEXT