ಸಾಂದರ್ಭಿಕ ಚಿತ್ರ 
ದೇಶ

ಕೆಎಫ್‌ಸಿ ಸೇರಿದಂತೆ 500 ಮಾಂಸಾಹಾರ ಅಂಗಡಿಗಳನ್ನು ಬಂದ್ ಮಾಡಿಸಿದ ಶಿವಸೇನೆ

ಕೆಎಫ್‌ಸಿ ಸೇರಿದಂತೆ ಮಾಂಸಾಹಾರ ಉತ್ಪನ್ನಗಳನ್ನು ಮಾರುವ ಗುರ್ ಗಾವ್ ನಲ್ಲಿರುವ ಸುಮಾರು 500ರಷ್ಟು ಅಂಗಡಿಗಳನ್ನು ಶಿವಸೇನಾ ಕಾರ್ಯಕರ್ತರು ಬಂದ್..

ಚಂಡೀಗಡ: ಕೆಎಫ್‌ಸಿ ಸೇರಿದಂತೆ ಮಾಂಸಾಹಾರ ಉತ್ಪನ್ನಗಳನ್ನು ಮಾರುವ ಗುರ್ ಗಾವ್ ನಲ್ಲಿರುವ ಸುಮಾರು 500ರಷ್ಟು ಅಂಗಡಿಗಳನ್ನು  ಶಿವಸೇನಾ ಕಾರ್ಯಕರ್ತರು  ಬಂದ್ ಮಾಡಿಸಿದ್ದಾರೆ.

ಮಾರ್ಚ್ 28ರಿಂದ ಏಪ್ರಿಲ್ 5ರವರೆಗೆ 9 ದಿನಗಳ ಕಾಲ ಹಿಂದೂಗಳು ಚೈತ್ರ ನವರಾತ್ರಿ ಆಚರಣೆ ಮಾಡುತ್ತಾರೆ. ನವರಾತ್ರಿ ಪ್ರಯುಕ್ತ ಮಾಂಸಾಹಾರ ಮಾರಾಟ ಮಾಡುವಂತಿಲ್ಲ. ಹಾಗಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾಗಿ ಶಿವಸೇನಾ ಕಾರ್ಯಕರ್ತರು ಹೇಳಿದ್ದಾರೆ.

ನವರಾತ್ರಿಯ ವೇಳೆ ಸಾಮಾನ್ಯವಾಗಿ ಇಲ್ಲಿನ ಅಂಗಡಿಯವರು ವ್ಯಾಪಾರ ನಡೆಸುವುದಿಲ್ಲ. ಆದರೆ ಕಳೆದ ವರ್ಷ ಹೆಚ್ಚಿನವರು ವ್ಯಾಪಾರ ನಡೆಸಿದ್ದರು. ಹಾಗಾಗಿ ಈ ಬಾರಿ ನಾವು ಈ ಅಭಿಯಾನ ಮಾಡಿದ್ದೇವೆ. ನವರಾತ್ರಿಯ ವೇಳೆ ಅಂಗಡಿಗಳನ್ನು ಮುಚ್ಚುವಂತೆ ನಾವು ಅವರಿಗೆ ಹೇಳಿದ್ದೇವೆ. ಮಾತ್ರವಲ್ಲದೆ ಮಂಗಳವಾರ ಅಂಗಡಿ ತೆರೆದು ವ್ಯಾಪಾರ ನಡೆಸಬಾರದು ಎಂದಿದ್ದೇವೆ. ಎಲ್ಲವೂ ಶಾಂತರೀತಿಯಲ್ಲೇ ನಡೆದಿದೆ ಎಂದು ಶಿವಸೇನೆಯ ಮಾಧ್ಯಮ ಸಂಯೋಜಕ ರೀತು ರಾಜ್  ಹೇಳಿದ್ದಾರೆ,

ಬಲವಂತವಾಗಿ ಯಾರೊಬ್ಬರೂ ಅಂಗಡಿಯನ್ನು ಮುಚ್ಚಿ ಎಂದು ಹೇಳುವಂತಿಲ್ಲ. ಹಾಗೇನಾದರೂ ಇದ್ದರೆ ಕ್ರಮ ತೆಗೆದುಕೊಳ್ಳಲಾಗುವುದು, ಆದರೆ ಇಲ್ಲಿಯವರೆಗೂ ಈ ಸಂಬಂಧ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಕಮಿಷನರ್ ಸಂದೀಪ್ ಖಿರ್ವಾರ್ ಹೇಳಿದ್ದಾರೆ.

ಇನ್ನೂ ಕಳೆದ ವರ್ಷವು ಕಡ ಜೈನರ ಪರ್ಯೂಶನ್ (ಉಪವಾಸ ಮಾಡುವ ಸಮಯ) ವೇಳೆಯೂ ಮಾಂಸ ಮಾರಾಟ ಮಾಡಬಾರದೆಂದು ಬಲವಂತವಾಗಿ ಮಾಂಸದಂಗಡಿಗಳನ್ನು ಮುಚ್ಚಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT