ಶಿವಪಾಲ್ ಯಾದವ್ 
ದೇಶ

ಮುಲಾಯಂಗೆ ಎಸ್'ಪಿ ಪಕ್ಷದ ನೇತೃತ್ವ ವಹಿಸದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ: ಶಿವಪಾಲ್

ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ...

ಕಾನ್ಪುರ: ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. 
ಸಮಾಜವಾದಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಲಾಯಂಗೆ ಪಕ್ಷದ ಚುಕ್ಕಾಣಿ ನೀಡುವುದಾಗಿ ಈ ಹಿಂದೆಯೇ ಅಖಿಲೇಶ್ ಹೇಳಿದ್ದರು. ಆದರೆ, ಆ ಕೆಲಸ ಇನ್ನೂ ಆಗಿಲ್ಲ. ಇದಕ್ಕೆ ಇನ್ನೂ 3 ತಿಂಗಳೂ ಸಮಯ ನೀಡುವೆ. ಆಗಲೂ ನೇತಾಜಿಯವರಿಗೆ ಪಕ್ಷದ ನೇತೃತ್ವ ನೀಡದೇ ಹೋದರೆ, ಹೊಸ ಪಕ್ಷ ಸ್ಥಾಪನೆ ಖಚಿತ ಎಂದು ಶಿವಪಾಲ್ ಹೇಳಿದ್ದಾರೆ. 
ಇದೇ ವೇಳೆ ರಾಮ್ ಗೋಪಾಲ್ ಅವರ ಹೆಸರನ್ನು ಹೇಳದೆಯೇ ಅವರ ವಾಗ್ದಾಳಿ ನಡೆಸಿರುವ ಶಿವಪಾಲ್ ಅವರು, ರಾಮ್ ಗೋಪಾಲ್ ಒಬ್ಬ ಶಕುನಿ ಇದ್ದಂತೆಯ ಮೊದಲು ಅವರು ಭಗವತ್ ಗೀತೆಯನ್ನು ಒದಬೇಕು. ಶಕುನಿ ಏನು ಮಾಡಿದ್ದನೋ ಅದನ್ನೇ ರಾಮ್ ಗೋಪಾಲ್ ಅವರು ಮಾಡಿದ್ದಾರೆ, ರಾಮ್ ಗೋಪಾಲ್ ಮೊದಲು ಭಗವತ್ ಗೀತೆಯನ್ನು ಓದಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT